ಕಾರ್ಕಳ ಎಕ್ಸ್ಪ್ರೆಸ್ “ಮುಕೇಶ”

ಕಾರ್ಕಳ ಎಕ್ಸ್ಪ್ರೆಸ್ “ಮುಕೇಶ” ನಮಸ್ಕಾರ, ನಮ್ಮೆಲ್ಲ ಪ್ರೀತಿಯ ಓದುಗರಿಗೆ ನಾವು ಮಾಡುವ ಹೃದಯ ತುಂಬಿ ನಮಸ್ಕಾರ, ನಿಮ್ಮ ಪ್ರೀತಿ, ಬೆಂಬಲವು ನಮ್ಮ ಬರವಣಿಗೆಗೆ ಶಕ್ತಿ. ಇಂದು ನಾವು ನಿಮ್ಮ ಮುಂದೆ ಪರಿಚಯಿಸುವುದು ಕಂಬಳ ಕ್ಷೇತ್ರದ ಇನ್ನೊಬ್ಬ ಅದ್ಬುತ ಸಾಧಕ, ವೇಗದ ಓಟದಲ್ಲಿ ತನ್ನದೇ ಆದ ಛಪನ್ನು ಮೂಡಿಸಿದ ಸೌಮ್ಯ ಸ್ವಭಾವದಿಂದ ಸಾವಿರಾರು ಕಂಬಳಾಭಿಮಾನಿಗಳ ಹೃದಯದಲ್ಲಿ ಅಳಿಸಲಾಗದ ನೆನಪಾಗಿ ಉಳಿದಿರುವ ಕಾರ್ಕಳದ ಜೀವಂಧರ್ ಅಡ್ಯಾಂತಾಯರ ಪ್ರೀತಿಯ ಕೋಣ “ಮುಕೇಶ”. ಬಿಸಿಲಿನ ಗದ್ದೆಯ ಹೊಳಪಿಗೆ ಜೀವ ತುಂಬಿದಂತೆ ಮುಕೇಶನ ಓಟ, ಅವನ ಓಟವೆಂದರೆ...ಕೇವಲ ಓಟವಲ್ಲ- ಅದು ಪ್ರತಿ ಪ್ರೇಕ್ಷಕನಿಗೆ ಉಸಿರು ಗಟ್ಟಿಸುವ ಕ್ಷಣ. ಆ ದೃಶ್ಯ ಕುತೂಹಲದ ನೋಟವಾಗಿ ಬದಲಾಗುತ್ತಿತ್ತು. "ಕಾರ್ಕಳದ ಮುತ್ತು"- "ಕಾರ್ಕಳ ಎಕ್ಸ್ ಪ್ರೆಸ್"ಎಂದು ಅಭಿಮಾನಿಗಳಿಂದ ಹೆಸರಿಸಲ್ಪಟ್ಟ "ಮುಕೇಶ" ಅನೇಕ ಬಾರೀ ಪ್ರಶಸ್ತಿಗಳನ್ನು ತನ್ನ ಹೆಸರಿನಲ್ಲಿ ಬರೆದುಕೊಂಡು ಯಜಮಾನರ ಹೆಸರಿಗೆ ಗೌರವ ಕಿರೀಟವನ್ನೊಪ್ಪಿಸಿದ್ದಾನೆ. ಅವನ ಪಾದಸ್ಪರ್ಶವಿಲ್ಲದ ಗದ್ದೆಯಾದರೂ ಸಹ ಅವನನ್ನು ಮರೆತವರಿಲ್ಲ. ಆಟೋಗಳ ಹಿಂಭಾಗದಲ್ಲಿ , ಬಸ್ಸುಗಳ ಬ್ಯಾನರ್ಗಳಲ್ಲಿ , ಹಲವು ಜನರ ಮೊಬೈಲ್ ವಾಲ್ಪೇಪರ್ನಲ್ಲಿ ಅವನ ಭಾವ ಚಿತ್ರ ಇನ್ನು ಮಿಂಚುತ್ತಿದೆ. ಒಮ್ಮೆ ಬೆಂಗಳೂರಿಗೆ ಭೇಟಿ ನೀಡಿದಾಗ, ಊಟಕೆಂದು ತೆರಳಿದ್ದ ಒಂದು ಹೊಟೇಲ್ನ ಗೋಡೆಯ ಮೇಲೆ ಮಿಂಚ...