Posts

Showing posts from July, 2025

ಆಟಿ ಅಮವಾಸ್ಯೆ - ಸಂಸ್ಕ್ರತಿ ಪಾಠ, ಆರೋಗ್ಯದ ಮಾರ್ಗ

Image
  ಆಟಿ ಅಮವಾಸ್ಯೆ - ಸಂಸ್ಕ್ರತಿ ಪಾಠ, ಆರೋಗ್ಯದ ಮಾರ್ಗ ನಮಸ್ಕಾರ, 1. ಆಟಿ ಅಮವಾಸ್ಯೆ – ಕಷ್ಟದ ತಿಂಗಳ ವಿಶೇಷತೆ ತುಳುನಾಡು - ಮಣ್ಣಿನ ಮಡಿಲಲ್ಲಿ ಬೆಳೆದ ನಾಡು...ಇಲ್ಲಿನ ಭಾಷೆ, ಪರಂಪರೆ, ಈ ನಾಡಿನ ಜೀವಾಳ... ದೈವಾರಾಧನೆ ವೇಳೆ ದೈವ ನರ್ತಕನ ಸಂದೇಶದಲ್ಲಿ ಭಕ್ತರು ಹುಡುಕುವ ನಂಬಿಕೆಯ ಬೆಳಕು....ಕಂಬಳದ ಗದ್ದೆಯಲ್ಲಿ ಕೋಣಗಳ ಓಟ, ಕೃಷಿಕರ ಜೀವನಕ್ಕೆ ಸಲ್ಲಿಸುವ ಗೌರವದ ಕ್ರೀಡೆ... ನಾಗದೇವರ ಪುಣ್ಯ ಭೂಮಿಯಾಗಿ ಪ್ರಸಿದ್ದವಾದ, ಈ ತುಳುನಾಡು. ಇಲ್ಲಿ ನಡೆಯುವ ಆಚರಣೆಗಳು ಕೇವಲ ಧಾರ್ಮಿಕ ವಿಧಿವಿಧಾನಗಳು ಮಾತ್ರವಲ್ಲ, ಅವು ನಮ್ಮ ಹಿರಿಯರ ಬದುಕಿನ ಮೌಲ್ಯಗಳು ಹಾಗೂ ಜೀವನ ಪಾಠ, ಪ್ರಕೃತಿಗೆ ನೀಡುವ ಗೌರವದ ಸಂಕೇತ.  2. ತುಳುನಾಡಿನ ಸಂಸ್ಕ್ರತಿ – ಬದುಕಿನ ಪಾಠ ಈ ನಾಡಿನಲ್ಲಿ  ಆಚರಿಸಲಾಗುವ ಪ್ರತಿಯೊಂದು ಹಬ್ಬವೂ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದ್ದು, ಜನರ ನಿತ್ಯ ಜೀವನದ ಒಂದು ಅವಿಭಾಜ್ಯ ಭಾಗವಾಗಿದೆ. ಅಂತಹ ಹಬ್ಬಗಳಲ್ಲಿ ಒಂದು ವಿಶೇಷ ಸ್ಥಾನ ಪಡೆದಿರುವುದು ಆಟಿ ಅಮವಾಸ್ಯೆ. ಇದು ತುಳುನಾಡಿನ  ಸಾಂಪ್ರದಾಯಿಕ ಹಬ್ಬಗಳಲ್ಲಿ ಪ್ರಮುಖವಾದದ್ದು.  ಈ ಹಬ್ಬವು ಜುಲೈ ತಿಂಗಳ ಸಂಕ್ರಮಣದ 16ರಂದು ಪ್ರಾರಂಭವಾಗಿ ಮುಂದಿನ ತಿಂಗಳ ಆಗಸ್ಟ್‌ 14 ರ, ಒಂದು ಸಂಕ್ರಮಣದಿಂದ ಇನ್ನೊಂದು ಸಂಕ್ರಮಣದವರೆಗೆ ಆಚರಿಸಲಾಗುತ್ತದೆ.  3.  ಮನೆ ಶುದ್ಧೀಕರಣ – ಮನಸ್ಸಿನ ಶುದ್ಧೀಕರಣ ಈ ತಿಂಗಳನ್ನು ಆಟಿ ಎಂದೇ ಕರೆಯಲಾಗುತ್ತದೆ. ಹಿಂ...

ಕಾರ್ಕಳ ಎಕ್ಸ್ಪ್ರೆಸ್ “ಮುಕೇಶ”

Image
ಕಾರ್ಕಳ ಎಕ್ಸ್ಪ್ರೆಸ್  “ಮುಕೇಶ”    ನಮಸ್ಕಾರ,  1. ಕಂಬಳ ಕ್ಷೇತ್ರದ ಸೂಪರ್ ಸ್ಟಾರ್ – “ಮುಕೇಶ”  ನಮ್ಮೆಲ್ಲ ಪ್ರೀತಿಯ ಓದುಗರಿಗೆ ನಾವು ಮಾಡುವ ಹೃದಯ ತುಂಬಿ ನಮಸ್ಕಾರ, ನಿಮ್ಮ ಪ್ರೀತಿ, ಬೆಂಬಲವು ನಮ್ಮ ಬರವಣಿಗೆಗೆ ಶಕ್ತಿ.  ಇಂದು ನಾವು ನಿಮ್ಮ ಮುಂದೆ  ಪರಿಚಯಿಸುವುದು ಕಂಬಳ ಕ್ಷೇತ್ರದ ಇನ್ನೊಬ್ಬ ಅದ್ಬುತ ಸಾಧಕ, ವೇಗದ ಓಟದಲ್ಲಿ ತನ್ನದೇ ಆದ ಛಪನ್ನು ಮೂಡಿಸಿದ ಸೌಮ್ಯ ಸ್ವಭಾವದಿಂದ ಸಾವಿರಾರು ಕಂಬಳಾಭಿಮಾನಿಗಳ ಹೃದಯದಲ್ಲಿ ಅಳಿಸಲಾಗದ ನೆನಪಾಗಿ ಉಳಿದಿರುವ  ಕಾರ್ಕಳದ ಜೀವಂಧರ್‌ ಅಡ್ಯಾಂತಾಯರ ಪ್ರೀತಿಯ ಕೋಣ “ಮುಕೇಶ”. ಬಿಸಿಲಿನ ಗದ್ದೆಯ ಹೊಳಪಿಗೆ ಜೀವ ತುಂಬಿದಂತೆ ಮುಕೇಶನ ಓಟ, ಅವನ ಓಟವೆಂದರೆ...ಕೇವಲ ಓಟವಲ್ಲ- ಅದು ಪ್ರತಿ ಪ್ರೇಕ್ಷಕನಿಗೆ ಉಸಿರು ಗಟ್ಟಿಸುವ ಕ್ಷಣ.  2. ಕಾರ್ಕಳದ ಮುತ್ತು – ಅಭಿಮಾನಿಗಳ ಹೃದಯ ಗೆದ್ದ ಓಟ ಆ ದೃಶ್ಯ ಕುತೂಹಲದ ನೋಟವಾಗಿ ಬದಲಾಗುತ್ತಿತ್ತು. "ಕಾರ್ಕಳದ ಮುತ್ತು"- "ಕಾರ್ಕಳ ಎಕ್ಸ್ ಪ್ರೆಸ್"ಎಂದು ಅಭಿಮಾನಿಗಳಿಂದ ಹೆಸರಿಸಲ್ಪಟ್ಟ "ಮುಕೇಶ" ಅನೇಕ ಬಾರೀ ಪ್ರಶಸ್ತಿಗಳನ್ನು ತನ್ನ ಹೆಸರಿನಲ್ಲಿ ಬರೆದುಕೊಂಡು ಯಜಮಾನರ ಹೆಸರಿಗೆ ಗೌರವ ಕಿರೀಟವನ್ನೊಪ್ಪಿಸಿದ್ದಾನೆ. ಅವನ ಪಾದಸ್ಪರ್ಶವಿಲ್ಲದ ಗದ್ದೆಯಾದರೂ ಸಹ ಅವನನ್ನು ಮರೆತವರಿಲ್ಲ.  ಆಟೋಗಳ ಹಿಂಭಾಗದಲ್ಲಿ , ಬಸ್ಸುಗಳ ಬ್ಯಾನರ್‌ಗಳಲ್ಲಿ , ಹಲವು ಜನರ ಮೊಬೈಲ್‌ ವಾಲ್ಪೇಪರ್ನಲ್ಲಿ ಅವನ ಭಾವ ಚಿತ್ರ ಇನ್ನು ...