Posts

Showing posts from April, 2025

ಕಾರ್ಕಳ - ಕಣ್ಣುಗಳಿಗೆ ಹಬ್ಬ, ಮನಸ್ಸಿಗೆ ಶಾಂತಿ

Image
 ಕಾರ್ಕಳ - ಕಣ್ಣುಗಳಿಗೆ ಹಬ್ಬ, ಮನಸ್ಸಿಗೆ ಶಾಂತಿ  ನಮಸ್ಕಾರ, ನಮ್ಮೆಲ್ಲ ಓದುಗಾರರಿಗೆ  ಹೃದಯಪೂರ್ವಕ ವಂದನೆಗಳು. ನಿಮ್ಮ ಅಪಾರ ಪ್ರೀತಿ ಹಾಗೂ ನೀಡಿದ ಬೆಂಬಲ ನಮಗೆ ಶಕ್ತಿ ಮತ್ತು ಸ್ಪೂರ್ತಿ ನೀಡಿದೆ. ಇಂತಹ ನಿಮ್ಮ ಬೆಂಬಲವು ಸದಾ ನಮ್ಮ ಜೊತೆಗೆ ಇರಲಿ ಎಂಬ ಆಶಯದೊಂದಿಗೆ ಇಂದು ನಾವು  ಪ್ರವಾಸ ಸ್ಥಳವಾದ ಕರ್ಕಾಳದ ಬಗ್ಗೆ ವಿವರವಾಗಿ ತಿಳಿದುಕೊಳ್ಳೊಣ. ಪ್ರಕೃತಿಯ ಸುಂದರತೆ, ಐತಿಹಾಸಿಕ ಮಹತ್ವ, ಮತ್ತು ಸಾಂಸ್ಕ್ರತಿಕ ವೈಶಿಷ್ಯತೆಗಳನ್ನು ಹೊಂದಿರುವ ಈ ಊರು ಪ್ರವಾಸಿಗರ ಮನಸ್ಸನ್ನು ಸೆಳೆಯುವಂತೆ ಮಾಡುತ್ತದೆ. ಈಗ ಈ ಸುಂದರ ಸ್ಥಳದ ಬಗ್ಗೆ ಸಂಕ್ಷಿಪ್ತ ಯಾತ್ರೆ ಮಾಡೋಣ. ಕಾರ್ಕಳದ ಬಸದಿ, ದೇವಾಸ್ಥಾನ, ಚರ್ಚ್‌, ಮಸೀದಿ, ಹೀಗೆ ಹಲವಾರು ಪುರಾತನ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ಧಾರ್ಮಿಕ ಕಳೆಯಿರುವ ಅಪರೂಪದ ನಗರವೇ ಕಾರ್ಕಳ. ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ತಾಲೂಕು ಕಾರ್ಕಳ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನೆಲೆಸಿದ್ದು, ಶತಮಾನಗಳ ಹಿಂದೆ ಜೈನರ  ಆಳ್ವಿಕೆಯ ಕಾಲದಲ್ಲಿ "ಪಾಂಡ್ಯ ನಗರಿ" ಎಂದು ಕರೆಯಲಾಗುತ್ತಿತ್ತು. ಸುತ್ತ ಮುತ್ತಲಲ್ಲಿ ಹೆಚ್ಚಾಗಿ ಕಪ್ಪು ಬಂಡೆಗಳು ಕಂಡುಬರುವ ಕಾರಣದಿಂದಾಗಿ ಈ ಪ್ರದೇಶವನ್ನು ಹಿಂದೆ ಕರಿಕಲ್ಲು ಎಂದು ಕರೆಯಲಾಗುತ್ತಿತ್ತು. ತುಳು ಭಾಷೆಯಲ್ಲಿ ಇದನ್ನು "ಕಾರ್ಲ" ಎಂದು ಕರೆಯುತ್ತಾರೆ. ಕಾರ್ಲ ಎಂಬ ಪದವು ಕನ್ನಡದಲ್ಲಿ ಕಾರ್ಕಳ ಎಂಬ ರೂಪಕ್ಕೆ ಬದಲಾಯಿತು. ಕಾರ್ಕಳದ ಪ್ರಾಚೀನ ಇತಿಹಾಸದತ್ತ...

"ಆಹಾ!! ಕರಾವಳಿ ಭಾಗದ ಆಹಾರ ರುಚಿ"

Image
  "ಆಹಾ!! ಕರಾವಳಿ ಭಾಗದ ಆಹಾರ ರುಚಿ" ತುಳುನಾಡು - ಕರ್ನಾಟಕದ ಕರಾವಳಿ ಭಾಗ, ಹಚ್ಚ ಹಸುರಿನ ಪ್ರಕೃತಿ ಸೊಬಗು, ಸಂಸ್ಕ್ರತಿಯ ಮತ್ತು ಭಾಷಾ ವೈವಿಧ್ಯತೆಯಿಂದ ಕೂಡಿದೆ, ನದಿಗಳು ಮತ್ತು ನೈಸರ್ಗಿಕ ಸಂಪತ್ತುಗಳು ಇಲ್ಲಿನ ಜನರ ಬದುಕಿನ ಭಾಗವಾಗಿದೆ. ಅದೇ ರೀತಿ ಆಹಾರ ರುಚಿಯಲ್ಲು ತುಳುನಾಡು ತನ್ನದೇ ಆದ ಗುರುತನ್ನು ಹೊಂದಿದೆ.  ಕರಾವಳಿ ಪ್ರದೇಶದ ಆಹಾರದ ರುಚಿ ಮನೆತನದ ಪರಂಪರೆಯ ಸುವಾಸನೆಯನ್ನು ಹೊತ್ತಿರುತ್ತದೆ. ಮಂಗಳೂರು ಮತ್ತು ಉಡುಪಿ ಪ್ರದೇಶಗಳ ಆಹಾರದಲ್ಲಿ ಸಮುದ್ರ ಆಹಾರವು ಪ್ರಮುಖ ಸ್ಥಾನದಲ್ಲಿದೆ. ಈ ಭಾಗದ ಜನರು, ತೆಂಗಿನ ಎಣ್ಣೆಯನ್ನು ಹೆಚ್ಚು ಬಳಸುತ್ತಾರೆ. ಉಡುಪಿ ಮತ್ತು ಮಂಗಳೂರಿನ ಅಡುಗೆ ಶೈಲಿ ಕರ್ನಾಟಕದ ಪ್ರಸಿದ್ದ ಕರಾವಳಿ ಆಹಾರ ಸಂಸ್ಕ್ರತಿಯನ್ನು ಪ್ರತಿಬಿಂಬಿಸುತ್ತದೆ. ಹೀಗೆ ಒಂದೊಂದೇ ಆಹಾರದ ಬಗ್ಗೆ ರುಚಿಸೋಣ ನೀರ್‌ ದೋಸೆ ತುಳುನಾಡಿನ ಮನೆ ಮತ್ತು ಹೋಟೆಲ್‌ಗಳಲ್ಲಿ ವಿಶೇಷವಾಗಿ ಬೆಳಗಿನ ತಿಂಡಿಯ ಸಮಯದಲ್ಲಿ "ನೀರ್‌ ದೋಸೆ" ಮುಖ್ಯ ಸ್ಥಾನವನ್ನು ಹೊಂದಿದೆ. ಇದನ್ನು ಅಕ್ಕಿ, ಉಪ್ಪು, ಮತ್ತು ನೀರನ್ನು ಬಳಸಿಕೊಂಡು ಸುಲಭ ವಿಧಾನದಲ್ಲಿ ತಯಾರಿಸಲಾಗುತ್ತದೆ.  ಇದನ್ನು ಕಾಯಿ ಚಟ್ನಿ, ಬೆಲ್ಲದ ಹಾಲು, ಕೋರಿ ಗಸಿ, ಮೀನು ಸಾರಿನೊಂದಿಗೆ ಸವಿಯಲು ಅದ್ಬುತವಾಗಿರುತ್ತದೆ. ಪತ್ರೋಡೆ     ತುಳುನಾಡಿನ ಸಾಂಪ್ರದಾಯಿಕ ಆರೋಗ್ಯಕರ ತಿಂಡಿ. ಇದನ್ನು ಅಕ್ಕಿ, ಕೆಸುವಿನ ಎಲೆ ಮತ್ತು ಮಸಾಲೆ ಪದಾರ್ಥಗಳನ್ನು ಬಳಸಿಕೊಂ...

ತುಳುನಾಡಿನ ಭತ್ತ ಬೇಸಾಯ

Image
                    ತುಳುನಾಡಿನ ಭತ್ತ ಬೇಸಾಯ ತ ತುಳುನಾಡು ನಮ್ಮ ಭಾರತ ದೇಶದ ನೈರತ್ಯ ಭಾಗದಲ್ಲಿರುವ ಒಂದು ಕಾರಾವಳಿ ಪ್ರದೇಶ ಇಲ್ಲಿನ ಜನರು ದ್ರಾವಿಡ ಭಾಷೆಯಾದ ತುಳುವನ್ನು ಮಾತನಾಡುತ್ತಾರೆ. ಇಲ್ಲಿನ ಜನರ ಜೀವನ ಶೈಲಿ ವಿಭಿನ್ನವಾಗಿದೆ. ಇಲ್ಲಿ ಹಲವಾರು ಭಾಷೆಯನ್ನು ಮಾತನಾಡುವ  ಜನರನ್ನು ಕಾಣಬಹುದು.ತುಳುನಾಡನ್ನು ಮುಖ್ಯವಾಗಿ ಪರಶುರಾಮ ಸೃಷ್ಠಿಯ ನಾಡೆಂದು ಕರೆಯುತ್ತಾರೆ. ಪುರಾಣಗಳ ಪ್ರಕಾರ ಪರಶುರಾಮನು ಈ ತುಳುನಾಡನ್ನು ಸಮುದ್ರದಿಂದ ಮರಳಿ ಪಡೆದನು. ಇದನ್ನು ಕೇರಳದ ಬಹಳ ಹಿಂದಿನ ಕೃತಿಯಾದ ಮಳಯಾಳಂನ ಕೇರಳೋತ್ಪತ್ತಿ ಕೃತಿಯ ಪ್ರಕಾರ ವಿಷ್ಣುವಿನ ಆರನೇ  ಅವತಾರವಾದ ಪರಶುರಾಮನು ತನ್ನ ಕೊಡಲಿಯನ್ನು ಸಮುದ್ರಕ್ಕೆ ಎಸೆದನು. ಇದರಿಂದ ಹೊಸ ಭೂ ಪ್ರದೇಶವು ಹುಟ್ಟಿಕೊಂಡಿತು ಎಂಬ ಇತಿಹಾಸವಿದೆ. ಹೀಗೆ ಹುಟ್ಟಿಕೊಂಡ ಭೂಮಿಯು ಉಪ್ಪಿನಿಂದ ಕೂಡಿತ್ತು ಮತ್ತು ಇಲ್ಲಿನ ಜನರಿಗೆ ವಾಸಿಸಲು ಸೂಕ್ತ ಜಾಗವಲ್ಲವೆಂದು ಹಾಲಾಹಲ ಎಂಬ ಪವಿತ್ರ ವಿಷವನ್ನು ಉಗುಳಿದರು, ಇದರ ನಂತರ ಭೂಮಿಯ ಮಣ್ಣಿನ ಗುಣ ಬದಲಾಯಿತು. ಭೂಮಿಯು ಫಲವತ್ತದ ಹಚ್ಚ ಹಸುರಾಗಿ ಮಾರ್ಪಡಯಿತು. ನಂತರ ಸರ್ಪರಾಜ ವಾಸುಕಿಯನ್ನು ಆಹ್ವಾನಿಸಿದನು ಎಂದು ಪುರಾಣದ ಕಥೆಗಳು ಹಾಗೂ ಕೃತಿಗಳು ತಿಳಿಸುತ್ತದೆ.  ಈ ಫಲವತ್ತದ ತುಳುನಾಡಿನ ಮಣ್ಣಿನ ಜನರು ಹಲವಾರು ಕೃಷಿಯನ್ನು ಮಾಡುತ್ತಾರೆ. ಇಲ್ಲಿ ಮುಖ್ಯವಾಗಿ ಅಕ್ಕಿ, ಕಡಲೆ, ಹುರು...

"ಕರಾವಳಿಯ ದೈವ ಶಕ್ತಿ"

Image
                                                           "ಕರಾವಳಿಯ ದೈವ ಶಕ್ತಿ" ನಮಸ್ಕಾರ, ತುಳುನಾಡು ಎಂದರೆ ಕರಾವಳಿ ಕರ್ನಾಟಕದ ಒಂದು ವಿಶೇಷ ಭೂಭಾಗ. ಇದು ಕಪ್ಪು ಮಣ್ಣಿನ ನಾಡು ಕೂಡ ಹೌದು. ಇಲ್ಲಿನ ಭಾಷೆ, ಸಂಸ್ಕ್ರತಿ, ಧಾರ್ಮಿಕ ಆಚರಣೆಗಳೊಂದಿಗೆ ಪ್ರಸಿದ್ಧವಾಗಿದೆ. ದೈವರಾಧನೆ, ನಾಗಾರಾಧನೆ, ಯಕ್ಷಗಾನ,ಕಂಬಳ ಹೀಗೆ ಹತ್ತು ಹಲವು ಸಾಂಪ್ರದಾಯಿಕ ಹಿನ್ನೆಲೆ ಇರುವಂತಹ ನಾಡು ಎಂದರೆ ಅದು ಈ ನಮ್ಮ ತುಳುನಾಡು. ಇಲ್ಲಿನ ಕೆಲವು ವಿಶೇಷವಾದ ಸಂಸ್ಕ್ರತಿಯನ್ನು ತಿಳಿಸುವ ಪ್ರಯತ್ನದಲ್ಲಿದ್ದೆವೆ. ಇಲ್ಲಿ ನಾವಿಂದು ದೈವಾರಾಧನೆ ಕಡೆ ಕಣ್ಣು ಹಾಯಿಸುವ. ದೈವಾರಾಧನೆಗೆ ಇಲ್ಲಿ ವಿಶೇಷವಾದ ಸ್ಥಾನಮಾನವಿದೆ. ತುಳುನಾಡು ಪ್ರದೇಶದ ಜನರು ಪ್ರಕೃತಿ, ಪ್ರಾಣಿಗಳು ಮತ್ತು ಭೂಮಿಯನ್ನು ಪವಿತ್ರವೆಂದು ಭಾವಿಸಿ, ತಮ್ಮ ಜೀವನವನ್ನು ರಕ್ಷಿಸುವ ಮತ್ತು ನೆಮ್ಮದಿಯನ್ನು ನೀಡುವ ದೈವಗಳಿಗೆ ಆರಾಧನೆ ಮಾಡುತ್ತಾರೆ. ದೈವಾರಾಧನೆಯು ಇಲ್ಲಿನ ಜನರ ಜೀವನದ ಒಂದು ಭಾಗವಾಗಿದೆ. ದೈವಾರಾಧನೆಯನ್ನು ತುಳುನಾಡಿನ ಜನರು ಅವರ ಪೂರ್ವಜರ ಕಾಲದಿಂದಲೂ ಆಚರಿಸಿಕೊಂಡು ಬಂದಿದ್ದಾರೆ. ದೈವದ ಮೇಲೆ ಇಲ್ಲಿನ ಜನರಿಗೆ ಅಪಾರವಾದ ಭಕ್ತಿ, ಪ್ರೀತಿ ಇದೆ. ತುಳುನಾಡಿನ ಜನರು ದೈವವನ್ನು ತಮ್ಮ ಮನೆ ಮ...