Posts

Showing posts from April, 2025

ಕಾರ್ಕಳ - ಕಣ್ಣುಗಳಿಗೆ ಹಬ್ಬ, ಮನಸ್ಸಿಗೆ ಶಾಂತಿ

Image
ಕಾರ್ಕಳ - ಕಣ್ಣುಗಳಿಗೆ ಹಬ್ಬ, ಮನಸ್ಸಿಗೆ ಶಾಂತಿ  ನಮಸ್ಕಾರ, ನಮ್ಮೆಲ್ಲ ಓದುಗರಿಗೆ ಹೃತ್ಪೂರ್ವಕ ವಂದನೆಗಳು, ನಿಮ್ಮ ಅಪಾರ ಪ್ರೀತಿ ಹಾಗೂ ಬೆಂಬಲದಿಂದ ನಮಗೆ ಸದಾ ಶಕ್ತಿ ಮತ್ತು ಸ್ಪೂರ್ತಿ ದೊರೆಯುತ್ತಿದೆ. ಇಂತಹ ಬೆಂಬಲ ಸದಾ ಇರಲಿ ಎಂಬ ಆಶಯದೊಂದಿಗೆ, ಇಂದು ನಾವು ಕರ್ನಾಟಕದ ಕರಾವಳಿಯ ಹೃದಯ ಭಾಗದಲ್ಲಿರುವ ಒಂದು ಅಪರೂಪದ ಪ್ರವಾಸಿ ತಾಣ  ಕಾರ್ಕಳದ ಬಗ್ಗೆ ಸಂಕ್ಷಿಪ್ತ ಯಾತ್ರೆ ಮಾಡೋಣ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನೆಲೆಸಿರುವ ಈ ನಗರವು ಪ್ರಕೃತಿ ಸೌಂದರ್ಯ, ಐತಿಹಾಸಿಕ ವೈಭವ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಬಸದಿಗಳು, ದೇವಾಲಯಗಳು, ಚರ್ಚುಗಳು, ಮಸೀದಿಗಳು — ಎಲ್ಲವನ್ನೂ ತನ್ನೊಳಗೆ ಹೊತ್ತಿರುವ ಸರ್ವಧರ್ಮ ಸೌಹಾರ್ದದ ಕೇಂದ್ರವಾಗಿಯೂ ಪ್ರಸಿದ್ಧವಾಗಿದೆ. 1. ಕಾರ್ಕಳದ ಹೆಸರು ಮತ್ತು ಇತಿಹಾಸ ಹೊಳಪುಗಳು ಕಾರ್ಕಳದ ಬಸದಿ, ದೇವಾಸ್ಥಾನ, ಚರ್ಚ್‌, ಮಸೀದಿ, ಹೀಗೆ ಹಲವಾರು ಪುರಾತನ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ಧಾರ್ಮಿಕ ಕಳೆಯಿರುವ ಅಪರೂಪದ ನಗರವೇ ಕಾರ್ಕಳ. ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ತಾಲೂಕು ಕಾರ್ಕಳ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನೆಲೆಸಿದ್ದು, ಶತಮಾನಗಳ ಹಿಂದೆ ಜೈನರ  ಆಳ್ವಿಕೆಯ ಕಾಲದಲ್ಲಿ "ಪಾಂಡ್ಯ ನಗರಿ" ಎಂದು ಕರೆಯಲಾಗುತ್ತಿತ್ತು. ಸುತ್ತ ಮುತ್ತಲಲ್ಲಿ ಹೆಚ್ಚಾಗಿ ಕಪ್ಪು ಬಂಡೆಗಳು ಕಂಡುಬರುವ ಕಾರಣದಿಂದಾಗಿ ಈ ಪ್ರದೇಶವನ್ನು ಹಿಂದೆ ಕರಿಕಲ್ಲು ಎಂದು ಕರೆಯಲಾಗುತ್ತಿತ್ತು. ತು...

"ಆಹಾ!! ಕರಾವಳಿ ಭಾಗದ ಆಹಾರ ರುಚಿ"

Image
  "ಆಹಾ!! ಕರಾವಳಿ ಭಾಗದ ಆಹಾರ ರುಚಿ" ನಮಸ್ಕಾರ, ತುಳುನಾಡು - ಕರ್ನಾಟಕದ ಕರಾವಳಿ ಭಾಗ, ಹಚ್ಚ ಹಸುರಿನ ಪ್ರಕೃತಿ ಸೊಬಗು, ಸಂಸ್ಕ್ರತಿಯ ಮತ್ತು ಭಾಷಾ ವೈವಿಧ್ಯತೆಯಿಂದ ಕೂಡಿದೆ, ನದಿಗಳು ಮತ್ತು ನೈಸರ್ಗಿಕ ಸಂಪತ್ತುಗಳು ಇಲ್ಲಿನ ಜನರ ಬದುಕಿನ ಭಾಗವಾಗಿದೆ. ಅದೇ ರೀತಿ ಆಹಾರ ರುಚಿಯಲ್ಲು ತುಳುನಾಡು ತನ್ನದೇ ಆದ ಗುರುತನ್ನು ಹೊಂದಿದೆ.  ಕರಾವಳಿ ಪ್ರದೇಶದ ಆಹಾರದ ರುಚಿ ಮನೆತನದ ಪರಂಪರೆಯ ಸುವಾಸನೆಯನ್ನು ಹೊತ್ತಿರುತ್ತದೆ. ಮಂಗಳೂರು ಮತ್ತು ಉಡುಪಿ ಪ್ರದೇಶಗಳ ಆಹಾರದಲ್ಲಿ ಸಮುದ್ರ ಆಹಾರವು ಪ್ರಮುಖ ಸ್ಥಾನದಲ್ಲಿದೆ. ಈ ಭಾಗದ ಜನರು, ತೆಂಗಿನ ಎಣ್ಣೆಯನ್ನು ಹೆಚ್ಚು ಬಳಸುತ್ತಾರೆ. ಉಡುಪಿ ಮತ್ತು ಮಂಗಳೂರಿನ ಅಡುಗೆ ಶೈಲಿ ಕರ್ನಾಟಕದ ಪ್ರಸಿದ್ದ ಕರಾವಳಿ ಆಹಾರ ಸಂಸ್ಕ್ರತಿಯನ್ನು ಪ್ರತಿಬಿಂಬಿಸುತ್ತದೆ. ಹೀಗೆ ಒಂದೊಂದೇ ಆಹಾರದ ಬಗ್ಗೆ ರುಚಿಸೋಣ ನೀರ್‌ ದೋಸೆ ತುಳುನಾಡಿನ ಮನೆ ಮತ್ತು ಹೋಟೆಲ್‌ಗಳಲ್ಲಿ ವಿಶೇಷವಾಗಿ ಬೆಳಗಿನ ತಿಂಡಿಯ ಸಮಯದಲ್ಲಿ "ನೀರ್‌ ದೋಸೆ" ಮುಖ್ಯ ಸ್ಥಾನವನ್ನು ಹೊಂದಿದೆ. ಇದನ್ನು ಅಕ್ಕಿ, ಉಪ್ಪು, ಮತ್ತು ನೀರನ್ನು ಬಳಸಿಕೊಂಡು ಸುಲಭ ವಿಧಾನದಲ್ಲಿ ತಯಾರಿಸಲಾಗುತ್ತದೆ.  ಇದನ್ನು ಕಾಯಿ ಚಟ್ನಿ, ಬೆಲ್ಲದ ಹಾಲು, ಕೋರಿ ಗಸಿ, ಮೀನು ಸಾರಿನೊಂದಿಗೆ ಸವಿಯಲು ಅದ್ಬುತವಾಗಿರುತ್ತದೆ. ಪತ್ರೋಡೆ     ತುಳುನಾಡಿನ ಸಾಂಪ್ರದಾಯಿಕ ಆರೋಗ್ಯಕರ ತಿಂಡಿ. ಇದನ್ನು ಅಕ್ಕಿ, ಕೆಸುವಿನ ಎಲೆ ಮತ್ತು ಮಸಾಲೆ ಪದಾರ್ಥಗಳನ್ನ...

ತುಳುನಾಡಿನ ಭತ್ತ ಬೇಸಾಯ

Image
                    ತುಳುನಾಡಿನ ಭತ್ತ ಬೇಸಾಯ ನಮಸ್ಕಾರ ತುಳುನಾಡು ಎಂದರೆ ಕರಾವಳಿ ಕರ್ನಾಟಕದ ನೈರತ್ಯ ಭಾಗದಲ್ಲಿ ಇರುವ ವಿಶಿಷ್ಟ ಭೂಪ್ರದೇಶ. ಇಲ್ಲಿ ಕಪ್ಪು ಮಣ್ಣು, ಹೆಚ್ಚು ಮಳೆ, ನದಿಗಳು, ಹಳ್ಳಿಗಳು ಮತ್ತು ಹಸಿರಾದ ಹಣ್ಣುಹೊಳೆಗಳು ಕಂಡು ಬರುತ್ತವೆ. ತುಳುನಾಡಿನ ಜನರು ದ್ರಾವಿಡ ಭಾಷೆಯಾದ ತುಳುವು ಮಾತನಾಡುತ್ತಾರೆ. ಹಳ್ಳಿಗಳ ನಡುವೆ ಹಾಗೂ ಕಡಲ ತೀರದ ಬಳಿ ಇರುವ ಗ್ರಾಮಗಳು, ಅವರ ಆಹಾರ ಪದ್ಧತಿ, ಸಂಸ್ಕೃತಿ, ಹಬ್ಬ–ಹಬ್ಬಗಳ ಆಚರಣೆಗಳು ಮತ್ತು ಕೃಷಿ ವಿಧಾನಗಳು ಬೇರೆ ಕಡೆ ಕಂಡಾಗ ಹೀಗೆ ಸಮೃದ್ಧವಾಗಿರುವುದಿಲ್ಲ. ತುಳುನಾಡನ್ನು ಪರಶುರಾಮ ಸೃಷ್ಠಿ ನಾಡು ಎಂದು ಕರೆಯುತ್ತಾರೆ. ಪುರಾಣಗಳ ಪ್ರಕಾರ, ಪರಶುರಾಮನು ಭೂಮಿಯನ್ನು ಸಮುದ್ರದಿಂದ ಮರಳಿ ಪಡೆದನು. ಮಳಯಾಳಂ ನ ಕೇರಳೋತ್ಪತ್ತಿ ಕೃತಿಯಲ್ಲಿ ತಿಳಿದಂತೆ, ಪರಶುರಾಮನು ಕೊಡಲಿಯನ್ನು ಸಮುದ್ರಕ್ಕೆ ಎಸೆದನು. ಸಮುದ್ರದಿಂದ ಹೊರಹೊಮ್ಮಿದ ಈ ಭೂಮಿ ಮೊದಲಿಗೆ ಉಪ್ಪಿನಿಂದ ತುಂಬಿತ್ತು. ಹೀಗಾಗಿ, ಅದರಲ್ಲಿ ವಾಸಿಸಲು ಜನರಿಗೆ ತಾಕತ್ತಿಲ್ಲದೆ ಹಾಲಾಹಲ ಎಂಬ ವಿಷವನ್ನು ಉಗುಳಿದನು. ನಂತರ, ಭೂಮಿಯ ಗುಣ ಬದಲಿಸಿ, ಹಸುರಾಗಿ, ಫಲವತ್ತಾಗಿ ಪರಿಗಣಿಸಲ್ಪಟ್ಟಿತು. ನಂತರ ಸರ್ಪರಾಜ ವಾಸುಕಿಯೂ ಇಲ್ಲಿ ವಾಸಕ್ಕೆ ಆಹ್ವಾನಿಸಲ್ಪಟ್ಟರು. ಈ ಪೌರಾಣಿಕ ಕಥೆಗಳು ತುಳುನಾಡಿನ ಭೂಮಿಯ ಪವಿತ್ರತೆಯನ್ನು ಮತ್ತಷ್ಟು ದೃಢಪಡಿಸುತ್ತವೆ. 1. ತುಳುನಾಡಿನ ಕೃಷಿ – ಪ್ರಮ...

"ಕರಾವಳಿಯ ದೈವ ಶಕ್ತಿ"

Image
   "ಕರಾವಳಿಯ ದೈವ ಶಕ್ತಿ" ನಮಸ್ಕಾರ, ತುಳುನಾಡು ಎಂದರೆ ಕರಾವಳಿ ಕರ್ನಾಟಕದ ಒಂದು ವಿಶಿಷ್ಟ ಭೂಭಾಗ. ಇದು ಕಪ್ಪು ಮಣ್ಣಿನ ನಾಡು ಎಂದೂ ಹೆಸರಾಗಿದೆ. ತುಳುನಾಡಿನ ಪ್ರಸಿದ್ಧಿ ಕೇವಲ ಅದರ ಭೂಗೋಳಿಕತೆಗೆ ಮಾತ್ರವಲ್ಲ, ಇಲ್ಲಿ ಕಂಡುಬರುವ ಧಾರ್ಮಿಕ ಆಚರಣೆಗಳು, ಭಾಷೆ, ಸಂಸ್ಕೃತಿ, ಹಾಗೂ ಜನರ ಜೀವನಶೈಲಿಗೂ ಕಾರಣವಾಗಿದೆ. ದೈವರ ಆರಾಧನೆ, ನಾಗಾರಾಧನೆ, ಯಕ್ಷಗಾನ, ಕಂಬಳ ಹೀಗೆ ಹಲವು ಸಾಂಪ್ರದಾಯಗಳು ಇಲ್ಲಿ ಸಾಕ್ಷಾತ್ಕಾರವಾಗಿವೆ. ಈ ಲೇಖನದಲ್ಲಿ ನಾನು ತುಳುನಾಡಿನ ದೈವಾರಾಧನೆ ಕುರಿತು ವಿವರವಾಗಿ ಪರಿಚಯಿಸೋಣ. 1. ತುಳುನಾಡಿನ ಜನರ ದೈವಾರಾಧನೆ  ತುಳುನಾಡಿನ ಜನರು ತಮ್ಮ ದೈವವನ್ನು ಮನೆಯ ಸದಸ್ಯರಂತೆ ಭಾವಿಸುತ್ತಾರೆ. ಬದುಕಿನ ಕಷ್ಟ, ನಷ್ಟ ಅಥವಾ ಬೇಜಾರಿನ ಸಮಯದಲ್ಲಿ ಅವರು ದೈವದ ಮುಂದೆ ನಿಂತು ತಮ್ಮ ಸಂಕಷ್ಟಗಳನ್ನು ಹಂಚಿಕೊಳ್ಳುತ್ತಾರೆ. "ನಮ್ಮ ದೈವ ನಮ್ಮನ್ನು ಕಾಯುತ್ತಾನೆ, ನಮ್ಮ ಕೈ ಹಿಡಿದಿಡುತ್ತಾನೆ" ಎಂಬ ನಂಬಿಕೆಯು ಇಲ್ಲಿ ಬಲವಾಗಿ ಬೆಳೆದಿದೆ. ವಿದೇಶಗಳಲ್ಲಿ ಅಥವಾ ಹಿರಿಯ ಹುದ್ದೆಗಳಲ್ಲಿ ಕೆಲಸ ಮಾಡಿದರೂ, ತಮ್ಮ ಮೂಲ ಸಂಸ್ಕೃತಿ, ದೈವಾರಾಧನೆ ಮರೆಯುವುದಿಲ್ಲ. ದೈವಗಳಿಗೆ ಸಂಬಂಧಪಟ್ಟ ನಂಬಿಕೆಗಳು ಅವರು ತಮ್ಮ ಜೀವನದಲ್ಲಿ ಆಧ್ಯಾತ್ಮಿಕ ಶಕ್ತಿ ಹಾಗೂ ನೆಮ್ಮದಿ ಪಡೆಯಲು ಸಹಾಯ ಮಾಡುತ್ತವೆ. 2. ದೈವದ ಮಂಚ – ಆರಾಧನೆಯ ಹೃದಯ ತುಳುನಾಡಿನ ದೈವ ಆರಾಧನೆಯಲ್ಲಿಯೇ ಮಂಚದ ಮಹತ್ವ ಅಪಾರ. ದೈವವನ್ನು ಹಲಸಿನ ಮರದ ಮಂಚದಲ್ಲಿ ಆಹ್ವಾನ...

ತುಳುನಾಡಿನ ಜನಪ್ರಿಯ ಕ್ರೀಡೆ "ಕಂಬಳ"

Image
 ನಮಸ್ಕಾರ, ಪರಿಚಯ ತುಳುನಾಡು – ಪರಶುರಾಮ ಸೃಷ್ಟಿಯೆಂದು ಕರೆಯಲ್ಪಡುವ ಈ ನೆಲವು, ತನ್ನ ನೈಸರ್ಗಿಕ ಸೌಂದರ್ಯದ ಜೊತೆಗೆ ವಿಭಿನ್ನ ಸಂಸ್ಕೃತಿ ಮತ್ತು ಪರಂಪರೆಗಳ ಮೂಲಕ ಭಾರತದ ಸಾಂಸ್ಕೃತಿಕ ನಕ್ಷೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಹಸಿರು ಕಾಡುಗಳು, ನದಿ, ಸಮುದ್ರ ತೀರಗಳು, ಬೆಟ್ಟಗಳು, ಕೃಷಿ ಜೀವನ ಮತ್ತು ಸಮೃದ್ಧ ಜನಪದ ಸಂಸ್ಕೃತಿ ತುಳುನಾಡಿನ ವೈಶಿಷ್ಟ್ಯ. ಇಲ್ಲಿ ಯಕ್ಷಗಾನ, ದೈವಾರಾಧನೆ, ನಾಗಾರಾಧನೆ ಮತ್ತು ಕಂಬಳ ವು ಪ್ರಮುಖ ಸಾಂಸ್ಕೃತಿಕ ಅಂಶಗಳಾಗಿವೆ. ಅವುಗಳಲ್ಲಿ ವಿಶೇಷವಾಗಿ ಕಂಬಳ ತುಳುನಾಡಿನ ಹೆಮ್ಮೆ, ಜನರ ಭಾವನೆ, ರೈತರ ಹಬ್ಬ, ಮತ್ತು ಇಂದಿನ ಕಾಲದಲ್ಲಿ ಜಾಗತಿಕ ಮಟ್ಟದಲ್ಲಿಯೂ ಗುರುತಿಸಲ್ಪಟ್ಟ ಕ್ರೀಡೆಯಾಗಿದೆ. 1. ಕಂಬಳದ ಮೂಲ ಕಂಬಳವು ಮೂಲತಃ ಕೃಷಿಕರ ಜೀವನಶೈಲಿಯಿಂದ ಹುಟ್ಟಿಕೊಂಡ ಕ್ರೀಡೆ. ಹಳೆಯ ಕಾಲದಲ್ಲಿ ರೈತರು ತಮ್ಮ ಹೊಲವನ್ನು ಸಮತಟ್ಟುಗೊಳಿಸಲು, ನೀರು ಸಮವಾಗಿ ಹರಿಯುವಂತೆ ಮಾಡಲು ಕೋಣಗಳ ಸಹಾಯದಿಂದ ಗದ್ದೆಗಳನ್ನು ಹದಗೊಳಿಸುತ್ತಿದ್ದರು. ಈ ಹಸನು ಕೆಲಸವೇ ನಿಧಾನವಾಗಿ ಕ್ರೀಡೆಯ ರೂಪವನ್ನು ಪಡೆದಿತು. ಹೀಗೆ, ರೈತರ ಪರಿಶ್ರಮ ಮತ್ತು ಉತ್ಸವದ ಮನೋಭಾವ ಒಂದಾಗಿ ಸೇರಿ ಕಂಬಳವನ್ನು ಜನಪ್ರಿಯ ಸಂಪ್ರದಾಯವನ್ನಾಗಿ ಮಾಡಿತು. ಶಾಸನಗಳಲ್ಲಿ ಕೂಡ ಕಂಬಳದ ಉಲ್ಲೇಖಗಳು ದೊರೆಯುತ್ತವೆ. ತಾಳಿಪಾಡಿ, ಶೃಂಗೇರಿ, ಕಲ್ಲುಮಾಗಣೆ ಮುಂತಾದ ಸ್ಥಳಗಳ ಶಾಸನಗಳಲ್ಲಿ ಕಂಬಳದ ಗದ್ದೆಗಳ ವಿಸ್ತೀರ್ಣ ಹಾಗೂ ಮಹತ್ವವನ್ನು ದಾಖಲಿಸಲಾಗಿದೆ. ಅಂದಿನ ಕಾಲದ...