ನಾರಾವಿ- ಪ್ರಕೃತಿಯ ಮಡಿಲಲ್ಲೊಂದು ಸುಂದರ ಹಳ್ಳಿ

 ನಾರಾವಿ - ಪ್ರಕೃತಿಯ ಮಡಿಲಲ್ಲೊಂದು ಸುಂದರ ಹಳ್ಳಿ 

ನಾರಾವಿ, ಕರ್ನಾಟಕದ ದಕ್ಷಿಣ ಕನ್ನಡ, ಬೆಳ್ತಂಗಡಿ ತಾಲೂಕಿನಲ್ಲಿರುವ ಒಂದು ಶಾಂತ ಹಾಗೂ ಆನಂದದ ಹಳ್ಳಿ.  ಇದು ಸುವರ್ಣ ನದಿಯ ತೀರದಲ್ಲಿದುವ ಅಪರೂಪದ ಐತಿಹಾಸಿಕ ಸ್ಥಳವಾಗಿದೆ. ಇಡೀ ಹಳ್ಳಿಯು ಪ್ರಕೃತಿಯ ಮಡಿಲಲ್ಲಿ ನೆಲೆಸಿದ್ದು, ಇಲ್ಲಿನ ಪರಿಸರ ನಿಜಕ್ಕೂ ಮನ ಸೆಳೆಯುವಂತಿದೆ. ಈ ಹಳ್ಳಿಯ ಜನರು ತಮ್ಮ ಮುಗ್ದತೆ, ಆತ್ಮೀಯತೆಯಲ್ಲಿ ಪ್ರಸಿದ್ದರು. ಸಣ್ಣ ಊರಾದರೂ ಸಹ ಇಲ್ಲಿ ಎಲ್ಲ ಧರ್ಮಗಳ ಪ್ರರ್ಥನಾ ಮಂದಿರಗಳು ಕಾಣಸಿಗುತ್ತವೆ. ಹಿಂದೂ ದೇವಸ್ಥಾನ, ಕ್ರೈಸ್ತ ಚರ್ಚ್‌ ಹಾಗೂ ಮಸೀದಿ. ನಾರಾವಿಯಲ್ಲಿ ಉತ್ಸವಗಳು ಹಾಗೂ ಸ್ಥಳೀಯ ಆಚರಣೆಗಳು ಕೂಡ ಬಹಳ ವೈವಿಧ್ಯಮಯವಾಗಿದೆ. ವರ್ಷದ ನಿರ್ದಿಷ್ಟ ಸಮಯದಲ್ಲಿ ನಡೆಯುವ ಜಾತ್ರೆಗಳು, ದೈವದ ಕೋಲ, ಎಲ್ಲವೂ ಅದ್ಬುತ. 

       

ಶ್ರೀ ಸೂರ್ಯನಾರಾಯಣ ದೇವಸ್ಥಾನ. 

ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ  ಶ್ರೀ ಸೂರ್ಯನಾರಾಯಣ ದೇವಸ್ಥಾನವು ಬಹಳ ಪ್ರಮುಖ್ಯತೆಯನ್ನು ಹೊಂದಿದೆ. ಸೂರ್ಯ ದೇವರನ್ನು ಎಲ್ಲರು ಪೂಜಿಸುತ್ತಾರೆ ಆದರೆ ಸೂರ್ಯನ ದೇವಾಲಯ ಬೆರಳೆನಿಕೆಯಷ್ಟು ಮಾತ್ರ. ಅದರಲ್ಲು ಎರಡು ಸೂರ್ಯ ದೇವಸ್ಥಾನಗಳು ನಮ್ಮ ದಕ್ಷಿಣ ಕನ್ನಡದಲ್ಲಿದೆ ಎಂಬುದು ಹೆಮ್ಮೆಯ ವಿಷಯ. ಒಂದು ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನ ಮಂಗಳೂರು, ಹಾಗೂ ಇನ್ನೊಂದು  ಶ್ರೀ ಸೂರ್ಯನಾರಾಯಣ ದೇವಸ್ಥಾನ ನಾರಾವಿ. ನಾರಾವಿಯ ದೇಗುಲವು ಇಡೀ ಭಾರತದಲ್ಲಿಯೇ ಅತ್ಯಂತ ಪುರಾತನ  ಸೂರ್ಯ ದೇವಾಲಯವಾಗಿದೆ. ಈ ಪುಣ್ಯ ಕ್ಷೇತ್ರಕ್ಕೆ ಸುಮಾಗು 800 ವರ್ಷಗಳ ಇತಿಹಾಸವಿದೆ. ಇದು ಪಶ್ಚಿಮ ಘಟ್ಟದ ಸುವರ್ಣ ನದಿಯ ತಟದಲಿದೆ. ಇದು ನಗರದಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿದೆ. ಇಲ್ಲಿನ ಪ್ರಶಾಂತವಾದ ವಾತಾವರಣವು ಭಕ್ತದಿಗಳಿಗೆ ನೆಮ್ಮದಿ ಕೊಡುತ್ತದೆ. ಇಲ್ಲಿನ ಇತಿಹಾಸವು,14ನೇ ಶತಮಾನದಲ್ಲಿ ನಾರಾವಿ ಊರಿನಲ್ಲಿ ರಮಾದೇವಿ ಎಂಬ ಸಾದ್ವಿ ಒಬ್ಬರು ವಾಸವಿದ್ದರು, ಆಕೆಯು ಶ್ರೀ ಸೂರ್ಯ ದೇವರ ಪರಮ ಭಕ್ತೆಯಾಗಿದ್ದು. ಪ್ರತಿದಿನ ಬಾನಿನಲ್ಲಿ ಮೂಡುವ ಸೂರ್ಯನ ದರ್ಶನ ಮಾಡಿಯೇ ಆಹಾರ ಸ್ವೀಕರಿಸುತ್ತಿದ್ದರು, ಅನೇಕ ಸಂದರ್ಭಗಳಲ್ಲಿ ಮೋಡ ಕವಿದ ವಾತವರಣದಿಂದ ಸೂರ್ಯನ ದರ್ಶನ ಮಾಡಲಾಗುತ್ತಿರಲಿಲ್ಲ. 

ಹೀಗೊಂದು ದಿನ ರಮಾದೇವಿಯು ನಿದ್ರೆಗೆ ಜಾರುತ್ತಿದ್ದಂತೆ ಕನಸಿನಲ್ಲಿ ಸೂರ್ಯ ದೇವನು ಗೋಚರಿಸಿ, ಆ ಪ್ರದೇಶದ ಸುವರ್ಣ ನದಿಯಲ್ಲಿ ನನ್ನ ಆಕಾರದ ಮೂರ್ತಿಯೊಂದಿದೆ, ಅದನ್ನು ಪ್ರತಿಷ್ಥಪಿಸಿ ನನ್ನ ಆರಾಧನೆ ಮಾಡಿ. ನಾನು ಆ ಮೂರ್ತಿಯ ಮೂಲಕ ದರ್ಶನ ನೀಡುತ್ತೇನೆ ಎಂದರು. ಹೀಗಾಗಿ ರಮಾದೇವಿಯು ಎಚ್ಚರಗೊಂಡು ಈ ವಿಗ್ರಹವನ್ನು ಪ್ರತಿಷ್ಠಪಿಸುವಂತೆ ಆದೇಶಿಸಿದ ತಾವು ಯಾರು..? ಎಂದು ಪ್ರಶ್ನಿಸಿದಾಗ ನಾ.. ರವಿ ಎಂಬ ಉತ್ತರದೊಂದಿಗೆ ಸೂರ್ಯದೇವನು ಅದೃಶ್ಯನಾಗುತ್ತರೆ. ಅದೇ ರೀತಿ ಸುವರ್ಣ ನದಿಯ ತೀರದಿಂದ ವಿಗ್ರಹವನ್ನು ಪ್ರಸ್ತುತ ದೇವಸ್ಥಾನವಿರುವ ಸ್ಥಳದಲ್ಲಿ ಶಾಸ್ತ್ರುಕ್ತವಾಗಿ ಪ್ರತಿಷ್ಠಪನೆ ಮಾಡಲಾಯಿತು. ಹೀಗಾಗಿ ಈ ಊರಿಗೆ ನಾರವಿ(ನಾರಾವಿ) ಎಂಬ ಹೆಸರು ಬಂತು. ಮುಂದೆ ರಮಾದೇವಿಯು ಶ್ರೀ ಸೂರ್ಯನಾರಾಯಣ ವಿಗ್ರಹವನ್ನು ಪೂಜಿಸುತ್ತ ಸಿದ್ದಿಯನ್ನು ಪಡೆದುಕೊಂಡರು ಎಂಬ ಕಥೆ ಇದೆ. ಈ ಮೂರ್ತಿಯನ್ನು ಪೂರ್ವಮುಖವಾಗಿ ಪ್ರತಿಷ್ಠಪನೆ ಮಾಡಿ ಪೂಜಿಸಲಾಗುತ್ತಿತ್ತು. ಆದರೆ ಈ ದೇವಸ್ಥಾನ ನಿರ್ಮಾಣವಾದ ಬಳಿಕ ಪೂರ್ವದಲ್ಲಿದ್ದ ಎಲ್ಲಾ ಮನೆಮಠಗಳು ಸೂರ್ಯದೇವರ ಪ್ರಕಾಶದಿಂದ ಸುಟ್ಟು ಹೋದವು. 

ರುದ್ರಾಕ್ಷ ಕಲ್ಲಿಂದ ನಿರ್ಮಾಣವಾಗಿದ್ದು ನೋಡಲು ಆಕರ್ಷಕವಾಗಿದೆ. ಮೀನ ಸಂಕ್ರಮಣದ ದಿನ ಉರುಳು ಸೇವೆ ನಡೆಯುತ್ತದೆ ಇದರಿಂದ ಎಲ್ಲಾ ರೀತಿಯ ರೋಗ, ಸಂಕಷ್ಟಗಳು ದೂರವಾಗುತ್ತದೆ ಎಂಬ ನಂಬಿಕೆ. ಹರಕೆಯ ರಂಗಪೂಜೆಯು ನಡೆಯುತ್ತದೆ. ಪ್ರತೀ ವರ್ಷ ಫೆಬ್ರವರಿ ಅಥವ ಮಾರ್ಚ್‌ ತಿಂಗಳಿನಲ್ಲಿ 7 ದಿನದ ಅದ್ದೂರಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಯಕ್ಷಗಾನ, ಶಾಲಾ ಮಕ್ಕಳ ನೃತ್ಯ, ನಾಟಕ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಜಾತ್ರಾ ದಿನಗಳಲ್ಲಿ ಮದ್ಯಹ್ನ ಹಾಗೂ ರಾತ್ರಿ ನಡೆಯುವ ದೇವರ ಬಲಿ ನೋಡುವುದೇ ವಿಶೇಷ. ಸೋಣ ಸಂಕ್ರಮಣದಂದು  ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಮೂರ್ತಿಗೆ ವಿಶೇಷ ಹೂವಿನಿಂದ ಅಲಂಕರಿಸಲಾಗುತ್ತದೆ. ಈ ದಿನ ನಾರಾವಿಯಲ್ಲಿ ಹಬ್ಬದ ವಾತಾವರಣವಿದ್ದು,  ಜಾತ್ರೆ ರೀತಿಯಲ್ಲಿ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ.

ಜರ್ಮನ್‌ ಬಸ್‌ ನಿಲ್ದಾಣ 

ನಾರಾವಿಯಲ್ಲಿ ಜರ್ಮನಿ ಶೈಲಿಯ ಬಸ್ ನಿಲ್ದಾಣವು  ರಾಜ್ಯದಲ್ಲೆ ಪ್ರಥಮ ಎನ್ನಲಾಗಿದ್ದು, ಪ್ರಾಯಾಣಿಕರ ತಂಗುದಾಣವಾಗಿದೆ. ಇದು 2018ರ ಜನವರಿ 21 ರಂದು ಉದ್ಘಾಟಿಸಲಾಯಿತು. ನೋಡಲು ಆಕರ್ಷಕವಗಿದ್ದು ಇದಕ್ಕೆ ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ತಂಗುದಾಣದಲ್ಲಿ ಪ್ರಾಯಾಣಿಕರ ಅನುಕೂಲಕ್ಕಾಗಿ ಕುಡಿಯುವ ನೀರಿನ ವ್ಯವಸ್ತೆ, ಟೈಮರ್‌ ಕ್ಲಾಕ್‌, ವಿದ್ಯುತ್‌, ಸಿಸಿಟಿವಿ ಕ್ಯಾಮರ, ಸೌಕರ್ಯಯುತ ಸ್ಟೇನ್‌ಲೆಸ್‌ ಸ್ಟೀಲ್‌ ಕುರ್ಚಿಗಳು, ಮೊಬೈಲ್‌ ಚಾರ್ಜಿಂಗ್‌ ಪಾಯಿಂಟ್‌, ರೇಡಿಯೋ ಹೀಗೆ ಹಲವಾರು ಸೌಲಭ್ಯಗಳನ್ನು ಒಳಗೊಂಡಿದೆ.

ಈ ವಿಶೇಷವಾದ ಜರ್ಮನ್‌  ಬಸ್‌ ನಿಲ್ದಾಣವನ್ನು "ಬಿ. ನಿರಂಜನ್ ಅರ್ಜಿ" ನಿರ್ಮಿಸಿದರು. ನಿರಂಜನ್‌ ಅರ್ಜಿ ಅವರು ತಮ್ಮ ಪುತ್ರಿ ಪ್ರತಿಕ್ಷ ಮತ್ತು ಅಳಿಯರೊಂದಿಗೆ ಜರ್ಮನಿಗೆ ಭೇಟಿ ನೀಡಿದಾಗ, ಅಲ್ಲಿನ ಆಧುನಿಕ ಬಸ್‌ ನಿಲ್ದಾಣಗಳ ವಿನ್ಯಾಸ ಮತ್ತು ಸೌಲಭ್ಯಗಳನ್ನು ನೋಡಿ ಪ್ರೇರಿತರಾಗಿ ತಮ್ಮ ಊರಾದ ನಾರಾವಿಯಲ್ಲಿ  ಜರ್ಮನ್‌ ಶೈಲಿಯ ಬಸ್ ನಿಲ್ದಾಣವನ್ನು ನಿರ್ಮಿಸಲು ನಿರ್ಧರಿಸಿದರು. ಈ ಯೋಜನೆಗೆ ಸ್ಥಳೀಯ ಇಂಜಿನಿಯರ್‌ನ ಸಹಕಾರ ಪಡೆದು "ರಾಮೆರ ಗುತ್ತು" ಎಂಬ ಹೆಸರಿನಿಂದ ನಿರ್ಮಣ ಮಾಡಿದರು. ಈ ನಿಲ್ದಾಣವು ಶಾಲೆಯ ರಸ್ತೆಗೆ ಸಮೀಪವಾಗಿರುವುದರಿಂದ ಮಕ್ಕಳು ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತಾರೆ. 

ಸಂತ ಅಂಥೋನಿ ಚರ್ಚ್, ನಾರಾವಿ 

ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿರುವ ಸೆಂಟ್ ಅಂಥೋನಿ ಚರ್ಚ್ ಒಂದು ರೋಮನ್ ಕ್ಯಾಥೋಲಿಕ್ ಚರ್ಚ್. ನಾರಾವಿಯ ಈ ಚರ್ಚ್ ಶತಮಾನಗಳಷ್ಟು ಹಳೆಯ ಇತಿಹಾಸ ಹೊಂದಿದೆ.  ಶತಮಾನದ ಹಿಂದೆ ಸ್ವಿಜಿರ್ಲ್ಯಾಂಡ್‌ನ  “ಫಾದರ್ ಪೌಷ್ಟಿನ್  ಕೋರ್ಟಿ ”ನಾರಾವಿಗೆ ಬಂದು  1905 ರಿಂದ 1926 ರ ವರೆಗೆ ಸೇವೆ ಸಲ್ಲಿಸಿದರು.  ನಾರಾವಿಯ ಚರ್ಚ್ 100 ವರ್ಷಗಳಿಗೂ ಹೆಚ್ಚಿನ ಇತಿಹಾಸವನ್ನು ಹೊಂದಿದೆ. 1870ರ ಸುಮಾರಿಗೆ ನಾರಾವಿಯಲ್ಲಿ ಸಣ್ಣ ಪ್ರಾರ್ಥನಾ ಮಂದಿರವನ್ನು ಸ್ಥಾಪಿಸಲಾಯಿತು.  ಸ್ವಿಜರ್ಲ್ಯಾಂಡ್ ನ ಫಾದರ್ "ಪೌಷ್ಟಿನ್  ಕೋರ್ಟಿ" ಆಗ ಮಂಗಳೂರಿನ ಸೆಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪ್ರಾಧ್ಯಪಕರಾಗಿದ್ದರು.  1905 ರಲ್ಲಿ ನಾರಾವಿಗೆ ಮಿಷನ್ ಕೆಲಸ ಮಾಡಲು ಬಂದರು.  ಸ್ಥಳೀಯ ಕೊರಗ ಜನರ ಜೀವನ ಶೈಲಿ ಮತ್ತು ಪರಿಸ್ಥಿತಿ ಕಂಡು ಫಾದರ್ ಕೋರ್ಟಿ ನಾರಾವಿಯಲ್ಲಿ ಮಿಷನರಿ ಕೆಲಸ ಪ್ರಾರಂಭಿಸಿದರು.  ಸ್ಥಳೀಯ ಜನರ ಸುದಾರಣೆಗಾಗಿ ಕೆಲಸ ಮಾಡಿದರು.  ಒಬ್ಬ ಉತ್ಸಹಬರಿತ ಪಾದ್ರಿಯಾಗಿದ್ದು,,  21 ವರ್ಷಗಳ ಕಾಲ ನಾರಾವಿಯಲ್ಲಿ ಶ್ರಮಿಸಿದರು. ಅಕ್ಟೋಬರ್ 4 ರಂದು 1911ರಲ್ಲಿ ಮಂಗಳೂರು ಡಯಸಿಸ್ನ  ಬಿಷಪ್ ಆಗಿದ್ದ “ರಿವೆಂಡರ್ ಫಾದರ್ ಫಾವೊಲೋ ಕರ್ಲೊ ಪಿರೇನಿ ” ನೆರವಿಗೆ ಭೇಟಿ ನೀಡಿದರು. ಇಲ್ಲಿನ ಸುಧಾರಣೆ ಕಂಡು ಆಶ್ಚರ್ಯರಾಗಿ.   ಬಹಳ ಸಂತೋಷದಿಂದ ಫಾದರ್ ಕೋರ್ಟಿ ಕೆಲಸಕ್ಕೆ ಶ್ಲಾಘನೇ ಮಾಡಿದರು. 

ಇದು ಮಾತ್ರವಲ್ಲದೆ ಫಾದರ್ ಕೋರ್ಟಿ ಅವರ ಅಪಾರ ಪ್ರಯತ್ನಗಳಿಂದ ಕೊರಗ ಜನರ ಶ್ರೇಯಾಭಿರುದ್ಧಿಗಾಗಿ ಫಾದರ್ ಕೋರ್ಟಿ ಅವರಿಗೆ ರಾಜ್ಯ ನಾಗರಿಕ ಇಲಾಖೆಯು “ಕೈಸರ್ -ಇ -ಹಿಂದ್ ”ಪದಕ ನೀಡಿ ಗೌರವಿಸಿತು.  ಮತ್ತೊಬ್ಬ ಮಿಷನರಿ “ರಿವೆಂಡರ್ ಫಾದರ್ ಗವಿರಗಿ ”ಅವರನ್ನು ಫಾದರ್ ಕೋರ್ಟಿಯ ಸಹಾಯಕರಾಗಿ ನೇಮಿಸಲಾಯಿತು ಆದರೆ ಕೆಲವೇ ದಿನಗಳಲ್ಲಿ ಗವಿರಗಿ ಅವರು ಮಿಶನ್ ಕೆಲಸಕ್ಕಾಗಿ ಅಳದಂಗಡಿಗೆ ತೆರಳಿದರು.  ಸಮಾಲೋಚನೆಗಾಗಿ ಫಾದರ್ ಕೋರ್ಟಿಗೆ ಭೇಟಿ ನೀಡುವ ಜನರ ಸಂಖ್ಯೆ ಹೆಚ್ಚಾದ ಕಾರಣ ಸಣ್ಣ ಕಚೇರಿಯನ್ನು ದೊಡ್ಡ ಮನೆಯನ್ನಾಗಿ ಪರಿವರ್ತಸಲಾಯಿತು.   ಮತ್ತೊಂದು “ರಿವೆಂಡರ್ ಫಾದರ್ ಜಿಯಾರೋ ”ಅವರನ್ನು ಫಾದರ್ ಕೋರ್ಟಿಯ  ಮಿಷನರಿ ಕೆಲಸದಲ್ಲಿ ಸಹಾಯ ಮಾಡಲು ಕಳುಹಿಸಲಾಯಿತು.  ಕ್ರಿಸ್ತಯನ್ನರ ಸಂಖ್ಯೆ ಹೆಚ್ಚಾದ ಕಾರಣ ಸಣ್ಣ ಪ್ರಾರ್ಥನಾ ಮಂದಿರ ಸಾಕಾಗುವುದಿಲ್ಲ ಎಂದು ಚರ್ಚ್ ನಿರ್ಮಿಸಲು ನಿರ್ಧರಿಸಿದರು.  ಫಾದರ್ ಜಿಯಾರೋ ಅವರ ಪ್ರಯತ್ನದಿಂದ ಹೊಸ ಚರ್ಚ್‌ಗೆ ಅಡಿಪಾಯ ಹಾಕುವ ಕೆಲಸ ಪ್ರಾರಂಭವಾಯಿತು.  ಈಗ ಈ ಚರ್ಚ್ ನ ಅಡಿಯಲ್ಲಿ ಹಲವಾರು ವಿದ್ಯಾಸಂಸ್ಥೆಗಳಿವೆ. 

ಅನಂತನಾಥ ಸ್ವಾಮಿ ಬಸದಿ , ನಾರಾವಿ 

ಈ ಜೈನ ಮಂದಿರವು ನಾರಾವಿಯ ಶ್ರೀ ಧರ್ಮನಾಥ ಸ್ವಾಮಿಯ  ಎದುರು ಗೋಪುರದ ಪಶ್ಚಿಮ ಬಾಗದಲ್ಲಿದೆ.  ಈ ಅನಂತನಾಥ ಸ್ವಾಮಿ ಬಸದಿಯ ಇತಿಹಾಸ ನೋಡುವುದಾದರೆ.  ಹಿಂದೆ ಶ್ರೀ ಅನಂತನಾಥ ಸ್ವಾಮಿಯನ್ನು ಕೆಳಗೆ ಸುವರ್ಣ ದಡದಲ್ಲಿದ್ದ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಮೇಗಿನ ನೆಲೆಯಲ್ಲಿ ಪೂಜಿಸಲಾಗುತಿತ್ತು.  ಈ ಸಮಗ್ರ ಬಸದಿಯನ್ನು ಸುವರ್ಣ ನದಿಯ ನೆರೆಯ ನೀರಿನ  ಬಾದೆಯಿಂದ ಸುರಕ್ಷಿತಾ ಸ್ಥಳವಾದ ಸ್ವರ್ಣನದಿಯ ಪರಿಸರಕ್ಕೆ ಸ್ಥಳಾಂತರಿಸಿ ಈ ನೂತನ ಬಸದಿಯಲ್ಲಿ ಸ್ವಾಮಿಯನ್ನು ಪ್ರತಿಷ್ಠಪಿಸಿ ಪೂಜಿಸಲು ಪ್ರಾರಂಭಿಸಲಾಯಿತು. ಈ ಸಮಯ ಧರ್ಮನಾಥ ಸ್ವಾಮಿಗೆ ನಡೆಯುತಿದ್ದ ಪಂಚಕಲ್ಯಾನೋತ್ಸವವನ್ನು  ಈ ಸ್ವಾಮಿಗೂ ಪಂಚಕಲ್ಯಾಣತ್ಸವವನ್ನು ನಡೆಸಲಾಯಿತು.

ಧರ್ಮನಾಥಸ್ವಾಮಿ ಬಸದಿ ನಾರಾವಿ 

ನಾರಾವಿಯ ಜೈನ ಬಸದಿ ಮತ್ತು ಧರ್ಮನಾಥಸ್ವಾಮಿ ಇಲ್ಲಿನ ಜೈನ ಸಮುದಾಯದ ಧಾರ್ಮಿಕ ಕೇಂದ್ರವಾಗಿ ಪ್ರಸಿದ್ಧವಾದ ಜೈನ ಬಸದಿ. ಶ್ರದ್ದೆ ಶಿಲ್ಪಖಲೆ ಮತ್ತು ಧರ್ಮಚಾರಣೆಗೆ ಬೆನ್ನು ತಟ್ಟಿ ನಿಂತಿದೆ. ಈ ಬಸದಿಯಲ್ಲಿ ಪೂಜಿಸಾಲ್ಪಡುವ ಪ್ರಮುಖ ತೀರ್ಥಕರರಾಗಿರುವವರು ಶ್ರೀ ಧರ್ಮನಾಥ ಸ್ವಾಮಿ.  ಧರ್ಮನಾಥ ಸ್ವಾಮಿಗಳು ಜೈನ ಧರ್ಮದ 15 ನೇ ತೀರ್ಥಕರರಾಗಿರುತ್ತಾರೆ. ಈ ಬಸದಿಯ ಗರ್ಭಗುಡಿಯಲ್ಲಿ ಸ್ಥಾಪಿಸಲಾದ ಬ್ರಹತ್ ಶೀಲಾಮಯ ಪ್ರತಿಮೆ ಧ್ಯಾನ ಮುದ್ರೆಯಲ್ಲಿ ಕಣ್ಣುಗಳಿಗೆ ಶಾಂತಿಯ ಅನುಭವ ನೀಡುತ್ತದೆ. ಈ ಬಸದಿಯು ಶುದ್ಧ ಜೈನ ಶಿಲ್ಪಾ ಶೈಲಿಯಲ್ಲಿ ನಿರ್ಮಿತವಾಗಿದೆ. ಈ ಧರ್ಮನಾಥ ಬಸದಿಯು ಶ್ರವಣಬೆಳಗೊಳ ಮತ್ತು ಮೂಡಬಿದ್ರೆಯ ಚಂದ್ರನಾಥ ಬಸದಿಯ ಶೈಲಿಯ ಪ್ರಭಾವವನ್ನು ಹೊಂದಿದೆ.  ಧರ್ಮನಾಥ ಸ್ವಾಮಿಗೆ ಸಮಾರ್ಪಿತವಾದ ವಾರ್ಷಿಕ ಜಾತ್ರೆ, ಪಂಚಕಲ್ಯಾಣ ಮಹೋತ್ಸವಗಳಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಾರೆ. ಇಲ್ಲಿನ ಪರಿಸರ ಧ್ಯಾನ ಶ್ರಾವಣ ಮತ್ತು ಸ್ವಧ್ಯನಕ್ಕೆ ಅನುಕೂಲವಾಗಿದೆ. 

ಶಾಂತಿನಾಥಸ್ವಾಮಿ ಬಸದಿ ನಾರಾವಿ  

ನಾರಾವಿಯ ಪ್ರಸಿದ್ಧ ಧರ್ಮನಾಥ ಸ್ವಾಮಿ ಬಸದಿಯ ಎದುರಿನ ಗೋಪುರದ ಬಲಬದಿಯಲ್ಲಿ  ಈ ಜಿನಲಾಯವನ್ನು ಕಾಣಬಹುದು. ನಾವು ಬಸದಿಯನ್ನು ಪ್ರವೇಶಿಸುವಾಗ ನಮಗೆ ಗಂಟಮಂಟಪ, ತೀರ್ಥನ್ಕರ ಮಂಟಪ, ಸುಖನಾಸಿ ಮತ್ತು ಗರ್ಭಗ್ರಹ ಕಾಣಸಿಗುತ್ತದೆ. ಮಕರ ತೋರಣ ಸಂಯುಕ್ತವಾದ ಸುಮಾರು ಮುರುವರೆ ಅಡಿ ಎತ್ತರದ ಭಗವಾನ್ ಶಾಂತಿನಾಥಸ್ವಾಮಿಯ ಶೀಲಾ ಬಿಂಬವನ್ನು ನಾವು ಕಾಣಬಹುದು. ಶ್ರೀ ಶಾಂತಿನಾಥ ಮತ್ತು ಶ್ರೀ ಅನಂತಸ್ವಾಮಿಯ ಹಿಂದಿನ ಬಸದಿ ಇದ್ದ ಸ್ಥಳದಲ್ಲಿ ಈಗ ಅನಾಥಶಾಂತಿ ತೀರ್ಥನ್ಕರವನ ಎಂಬ ತೀರ್ಥನ್ಕರ ಭಾಗವನರಿಗೆ ಸಂಬಂದಿಸಿದ ಗಿಡಗಳನ್ನು ನೆಟ್ಟು ಬೆಳೆಸಿರುವ ಒಂದು ವೆವಸ್ಥಿತವಾದ ವನವನ್ನು ನಾವು ಕಾಣಬಹುದು. ಈ ಹಿಂದೆ ಇಲ್ಲಿನ ಪರಿಸರದಲ್ಲಿ ಒಂದು ಅಮೂಲ್ಯವಾದ ಶಿಲಾ ಶಾಸನವು ಇತ್ತು.

ನಾರಾವಿ ಶ್ರೀ ಕಾಶೀ ಮಠ, ವೇಣುಗೋಪಾಲಕೃಷ್ಣ ದೇವಸ್ಥಾನ.

ಶ್ರೀ ಕಾಶೀ ಮಠವು ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಕೇಂದ್ರವಾಗಿದೆ. ಇದು ಶ್ರೀ ಕಾಶೀಮಠ ಸಂಸ್ಥಾನದ ಶಾಖಾ ಮಠವಾಗಿದ್ದು, ನಾರಾವಿ ಗ್ರಾಮದಲ್ಲಿ ಸ್ಥಾಪಿತವಾಗಿದೆ. ಈ ಮಠವು ಶ್ರೀ ವೇಣುಗೋಪಾಲಕೃಷ್ಣ ದೇವಾಲಯದೊಂದಿಗೆ ಸಂಯೋಜಿತವಾಗಿದ್ದು, ಸ್ಥಳೀಯ ಸಮುದಾಯದ ಧಾರ್ಮಿಕ ಚಟುವಟಿಕೆಗಳಿಗೆ ಕೇಂದ್ರಬಿಂದುವಾಗಿದೆ. ಇತ್ತೀಚೆಗೆ 2025ರ ಮಾರ್ಚ್‌ 24ರಂದು, ನಾರಾವಿ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ 50ನೇ ಪುನರ್‌ ಪ್ರತಿಷ್ಠಾ ವರ್ಧಂತಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಮಠವು ಧಾರ್ಮಿಕ ಆಚರಣೆಗಳು, ಭಜನೆಗಳು ಹೀಗೇ ಹಲವಾರು ಕಾರ್ಯಕ್ರಮಗಳೊಂದಿಗೆ ಪ್ರಮುಖ ಪಾತ್ರವಹಿಸುತ್ತದೆ. ಇಲ್ಲಿನ ನಂಬಿಕೆಯ ಪ್ರಕಾರ ಮಕ್ಕಳಾಗದಿದ್ದವರಿಗೆ ಶ್ರಧ್ಧೆ, ಭಕ್ತಿಯಿಂದ ಪ್ರಾರ್ಥಿಸಿದರೆ ದೇವರ ಕೃಪೆಯಿಂದ ಮಕ್ಕಳಾಗುತ್ತದೆ ಎಂಬ ನಂಬಿಕೆ ಇದೆ.

ನಾರಾವಿಯ ಸಂತೆ ಶನಿವಾರ 

ನಾರಾವಿಯಲ್ಲಿ ಪ್ರತಿ ಶನಿವಾರದಂದು ಸಂತೆ . ಈ ಸಂತೆಯಲ್ಲಿ ವಿಶೇಷವಾಗಿ ಜನರು ಓಣ ಮೀನು ಮತ್ತು ಹಸಿ ಮೀನನ್ನು ಖರೀದಿಸಲು ಹೋಗುತ್ತರೆ. ಬಗೆ ಬಗೆಯ ಮೀನುಗಳನ್ನು ನೋಡಲು ಸಂತೆಗೆ ಹೊಗುವ ಜನರಿದ್ದರೆ. ಹೆಚ್ಚಾಗಿ ಇಲ್ಲಿನ ಮಹಿಳೆಯರು ಸಂತೆಗೆ ಹೋಗಿ ಒಂದು ವಾರಕ್ಕೆ ಬೇಕಾದ ದಿನಸಿ ಪದಾರ್ಥಗಳನ್ನು ಸಂಗ್ರಹಿಸುತ್ತಾರೆ. ಈ ಸಂತೆಯ ದೃಶ್ಯವನ್ನು ನೋಡುವುದೆ ಖುಷಿ, ಇಲ್ಲಿ ಬಣ್ಣ ಬಣ್ಣದ ಮಕ್ಕಳ ಆಟದ ಸಾಮಗ್ರಿಗಳು, ತಿಂಡಿಗಳು, ಎಲ್ಲಾ ಬಗೆಯ ಸೊಪ್ಪು ತರಕಾರಿಗಳು, ಬಟ್ಟೆಗಳು, ಚಪ್ಪಲಿ ಹೀಗೆ ಎಲ್ಲಾವು ಇಲ್ಲಿ ಮಾರಾಟ ಮಾಡುತ್ತಾರೆ. ನಾರಾವಿ ಸಂತೆಯಲ್ಲಿ ಓಡಾಡುವ ಅನುಭವವೇ ಅದ್ಬುತ.

ನಮ್ಮ ಸಂಸ್ಕ್ರತಿ  ನಮ್ಮ ಹೆಮ್ಮೆ

ಜೈ ತುಳುನಾಡ್‌






Comments

Post a Comment

Popular posts from this blog

"ಕಂಬಳ ಕ್ಷೇತ್ರದ ಸಾದಕ, ಚಾಂಪಿಯನ್ ದೂಜ"

ಕಾರ್ಕಳ - ಕಣ್ಣುಗಳಿಗೆ ಹಬ್ಬ, ಮನಸ್ಸಿಗೆ ಶಾಂತಿ

ತುಳುನಾಡಿನ ಜನಪ್ರಿಯ ಕ್ರೀಡೆ "ಕಂಬಳ"