ದೇವಿ ಪುಣ್ಯ ಕ್ಷೇತ್ರಗಳ...ಭಕ್ತಿಯ ಪಯಣ
ದೇವಿ ಪುಣ್ಯ ಕ್ಷೇತ್ರಗಳ...ಭಕ್ತಿಯ ಪಯಣ
ನಮಸ್ಕಾರ,
ಕರಾವಳಿಯಲ್ಲಿ ಕಟೀಲ್ದಪ್ಪೆ ಎಂದೇ ಪ್ರಸಿದ್ಧಿ ಹೊಂದಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ತಾಯಿ, ಅಪಾರ ಭಕ್ತರನ್ನು ತನ್ನತ್ತ ಸೆಳೆಯುತ್ತಾಳೆ. ಆರು ಕಾಲುಗಳನ್ನು ಹೊಂದಿರುವ ದುಂಬಿಯಾಗಿ, ಭ್ರಮರಾಂಬಿಕೆಯ ರೂಪದಲ್ಲಿ ಅರುಣಾಸುರನನ್ನು ಸಂಹರಿಸುತ್ತಾಳೆ. ಆದಿ ಶಕ್ತಿಯನ್ನು ನಂದಿನಿಯ ಕುಟಿಯ ಲಿಂಗ ಸ್ವರೂಪದಲ್ಲಿ ಕಾಣಬಹುದು. ದೇವಸ್ಥಾನದಲ್ಲಿ ಲಿಂಗ ಸ್ವರೂಪಕ್ಕೆ ಅಭಿಷೇಕ ನಡೆಯುತ್ತದೆ. ನಂದಿನಿ ನದಿಯಲ್ಲಿ 2 ದ್ವೀಪಗಳಿವೆ- ಒಂದು ದೇವಿಯ ಮೂಲ ಸ್ಥಾನ, ಮತ್ತೊಂದು ಈಗೀನ ಪ್ರಸಿದ್ಧವಾದ ಕಟೀಲು ಕ್ಷೇತ್ರ ಮೂಲ ಕ್ಷೇತ್ರವಾಗಿದ್ದು, ಅರುಣಾಸುರನನ್ನು ಸಂಹರಿಸಿದ ದೇವಿಯನ್ನು ಎಳನೀರಿನ ಅಭಿಷೇಕ ಮಾಡಿ ಶಾಂತ ರೂಪಕ್ಕೆ ತಂದು ಪೂಜಿಸುತ್ತಾರೆ. ಶುಕ್ರವಾರ 800 ರಿಂದ 1000 ಎಳನೀರು ಭಕ್ತರಿಂದ ದೇವಿಗೆ ಸೇರುತ್ತದೆ. ಈ ಕ್ಷೇತ್ರದಲ್ಲಿ 2 ಹೊತ್ತು ಪೂಜೆ ಹಾಗೂ ಪ್ರಸಾದದ ರೂಪದಲ್ಲಿ ಅನ್ನದಾನ ನಡೆಯುತ್ತದೆ.
ಇಲ್ಲಿ ನಂದಿನಿ ನದಿ 16 ಮೈಲು ಉಗಮಿಸಿ, ಮತ್ತಷ್ಟು 16 ಮೈಲುಗಳ ಆಚೆ ಸಮುದ್ರ ಸೇರುತ್ತದೆ. ನಂದಿನಿಯ ಮದ್ಯೆ ಭಾಗದಲ್ಲಿ ಉದ್ಭವಿಸಿದ್ದರಿಂದ ಇದನ್ನು "ಕಟಿ ಪ್ರದೇಶ"ವೆಂದು ಹೇಳುತ್ತಾರೆ. ಹೀಗಾಗಿ ಈ ಸ್ಥಳಕ್ಕೆ ಕಟೀಲು ಎಂಬ ಹೆಸರು ಬಂತು. 1927ನೇ ಇಸವಿಯಲ್ಲಿ ಕಟೀಲು ಕ್ಷೇತ್ರಕ್ಕೆ ಶರೂರು ಮಠದೀಶರು ಭೇಟಿ ನೀಡಿ, "ಹ್ಯಾದ್ರಿ ಖಂಡ " ಎಂಬ ತಾಳೆ ಗರಿಯನ್ನು ಓದಿದರು ಅದನ್ನು ಉಡುಪಿಯ ಸೋದೆ ಶ್ರೀಗಳೊಂದಿಗೆ ಚರ್ಚಿಸಿ ಅನಂತ ಆಚಾರ್ಯ ಎಂಬ ವಿದ್ವಾಂಸರಲ್ಲಿ ಕೊಟ್ಟು ಆ ತಾಳೆಗರಿಯಲ್ಲಿದ್ದ ವಿಷಯಗಳನ್ನು "ಕಟೀಲು ಶ್ರೀ ಕ್ಷೇತ್ರ ಮಹಾತ್ಮೆ" ಎಂಬ ಪುಸ್ತಕವಾಗಿ ಮುದ್ರಣಗೊಳಿಸಿದರು ಈ ಪುಸ್ತಕದಲ್ಲಿ ಕ್ಷೇತ್ರದ ಸಂಪೂರ್ಣ ಇತಿಹಾಸವನ್ನು ತಿಳಿಯಬಹುದು.
1944 ನೇ ಇಸವಿಯಲ್ಲಿ ಭಾರಿ ಪ್ರವಾಹದಲ್ಲಿ ದೇವಾಲಯದ ದಾಖಲೆಗಳು ನಾಶವಾದವು. ಈ ಅತಿದೊಡ್ಡ ಪ್ರವಾಹ ಬಂದ ಸಂದರ್ಭ ದೇವಸ್ಥಾನದ ಗೋಡೆಗಳು ಜಾರಿ ಹೋಗಿದ್ದವು, ಪೂಜೆ ಮಾಡುವ ಅರ್ಚಕರು ಗರ್ಭಗುಡಿಯಲ್ಲಿ ಧುಮುಕಿದ ನೀರನ್ನು ನೋಡಿ ದೇವರು ಪ್ರವಾಹಕ್ಕೆ ಕೊಚ್ಚಿ ಹೋಗುತರೆಂಬ ಭಯದಿಂದ ಕಣ್ಣೀರಿಡುತ್ತ ಅರ್ಚಕರು "ತಾಯಿಯನ್ನು ನಾನು ಕಾಪಾಡುತೇನೆ, ತಾಯಿ ನನ್ನನು ಕಾಪಾಡುವಳು" ಎಂದು ಕಣ್ಣು ಮುಚ್ಚಿ ದೇವರ ಮೂರ್ತಿಯನ್ನು ಗಟ್ಟಿಯಾಗಿ ತಬ್ಬಿಕೊಂಡರು. ಕಣ್ಣು ತೆರೆಯುವ ವೇಳೆ ಪ್ರವಾಹ ನಿಂತಿತ್ತು. ಈ ಅದ್ಬುತ ಘಟನೆಯ ನಂತರ ಲೋಕಕ್ಕೆ ಇಲ್ಲಿನ ಸತ್ಯ ತಿಳಿದು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಈ ತಾಯಿಯೊಂದಿಗೆ ಹಂಚಿಕೊಳ್ಳುತ್ತಾರೆ. ಕಟೀಲು ದೇವಸ್ಥಾನದಲ್ಲಿ ಹೂವಿನ ಪೂಜೆಗೆ ಹೆಚ್ಚಿನ ಪ್ರಮುಖ್ಯತೆ ಹೊಂದಿದೆ. ಈ ದೇವರಿಗೆ ಮಲ್ಲಿಗೆ ಆತ್ಯಂತ ಪ್ರಿಯದಾಯಕವಾದದ್ದು, ಕಟೀಲಿನಲ್ಲಿ ಮಲ್ಲಿಗೆ ಹೂವಿಗೆ ತುಂಬಾ ಪ್ರಮಖ್ಯತೆ ಇದೆ. ಇಲ್ಲಿ ದುರ್ಗಾ ನಮಸ್ಕಾರ, ಹೂವಿನ ಪೂಜೆ, ರಂಗಪೂಜೆ, ಕುಂಕುಮಾರ್ಚನೆ, ಸಹಸ್ರ ನಾಮಾರ್ಚನೆ ಅಲಂಕಾರ ಪೂಜೆ ಮಹಾಪೂಜೆ ಇತ್ಯಾದಿ ಪೂಜೆಗಳನ್ನು ಮಾಡುತ್ತಾರೆ.
ಕಟೀಲಿನಲ್ಲಿ ವಿಶೇಷವಾಗಿ ವಿವಾಹಸಂಪನ್ನರಾಗಲು ಸೀರೆಯನ್ನು ಹರಕೆಯಾಗಿ ಕೊಡುತ್ತಾರೆ. ವಾರ್ಷಿಕವಾಗಿ ಸುಮಾರು 30 ಸಾವಿರ ಸೀರೆಗಳು ಹರಕೆ ರೂಪದಲ್ಲಿ ಬರುತ್ತದೆ. ಇದನ್ನು ಭಕ್ತದಿಗಳಿಗೆ ಅನ್ನದಾನದ ಸಂದರ್ಭದಲ್ಲಿ ವಿತರಿಸುತ್ತಾರೆ. ನವರಾತ್ರಿಯ ಲಲಿತ ಪಂಚಮಿಯ ದಿನ ವಿಶೇಷವಾಗಿ ರಾತ್ರಿ ಹೊತ್ತು ದರ್ಶನಕ್ಕೆ ಬಂದ ಹೆಣ್ಣು ಮಕ್ಕಳಿಗೆ ಆ ಸೀರೆಯನ್ನು ಸಾವಿರಾರು ಭಕ್ತರಿಗೆ ಪ್ರಸಾದದ ರೂಪದಲ್ಲಿ ವಿತರಿಸುತ್ತಾರೆ. ಮಹಾನವಾಮಿ ದಿನ ಮಹಾ ರಂಗ ಪೂಜೆ ನಡೆಯುತ್ತದೆ. ಈ ಪೂಜೆಯು 2 ಗಂಟೆಗಳ ಕಾಲ 800 ಆರತಿಗಳ ಪೂಜೆಯೊಂದಿಗೆ ಅತ್ಯಂತ ವೈಭವದಿಂದ ನಡೆಯುತ್ತದೆ.
ಕಟೀಲು ಕ್ಷೇತ್ರದ ಪ್ರಮುಖ ಆಕರ್ಷಣೆಯಲ್ಲಿ ಯಕ್ಷಗಾನವು ಒಂದು. "ಯಕ್ಷಗಾನ ಮೇಳ" ಕರ್ನಾಟಕ ಮತ್ತು ದೂರದ ಊರುಗಳಲ್ಲಿಯು ಬಹಳ ಪ್ರಸಿದ್ದವಾಗಿದೆ. ದೇವಸ್ಥಾನದ ಪೂಜೆ ಮುಗಿದ ನಂತರ ಅಮ್ಮ ಯಕ್ಷಗಾನ ವೀಕ್ಷಿಸಲು ಬರುತ್ತಾರೆ ಎಂದು ಭಕ್ತರ ನಂಬಿಕೆ. ಕಾರ್ತಿಕ ಮಾಸದ ಕೃಷ್ಣ ಪಕ್ಷದ ಪಂಚಮಿಯ ನಂತರ ಹೊರಟ ಯಕ್ಷಗಾನ ಮೇಳವು ವೈಭವ ಮಾಸದ 11 ನೇ ದಿನದ ಒಳಗೆ ನಡೆಯುತ್ತದೆ. ಈಗಲೂ ಅದೇ ಪ್ರಕಾರ ನಡೆಯುತ್ತ ಬಂದಿದೆ. ಏಕದಶಿಯಂದು ವಿಶೇಷ ನೈವೇದ್ಯ, ಪೂಜೆ ಬೋಜನ ಇರುವುದಿಲ್ಲ.
ವರ್ಷವದಿ ಉತ್ಸವವು ಮೇಷ ಮಾಸದ ಸಂಕ್ರಾತಿಯ ದಿನದಂದು ಆರಂಭವಾಗುತ್ತದೆ. 8 ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ 7ನೇ ದಿನ ರಥೋತ್ಸವ 8ನೇ ದಿನ ಅವಬ್ರತೋತ್ಸವ. ಈ ಉತ್ಸವ 13 ಗಂಟೆಗಳ ಕಾಲ ನಡೆಯುತ್ತದೆ ದೇವಿಯು ಅರುಣಾಸುರನನ್ನು ಸಂಹರಿಸಿದ ಎಕ್ಕಾರು ಸ್ಥಳಕ್ಕ ಹೋಗಿ ಅಲ್ಲಿಂದ ಭಕ್ತರ ಕಟ್ಟೆ ಪೂಜೆಯನ್ನು ಸ್ವೀಕರಿಸಿ ವೈಭವದ ಮೆರವಣಿಗೆಯೊಂದಿಗೆ ಬ್ರಹ್ಮ ರಥೋಸ್ತವ ಮುಗಿಸಿ ದೇವಿಗೆ ಸಂಪನ್ನ ಗೋಳಿಸುತ್ತಾರೆ. ಕೃಷ್ಣಾಷ್ಠಮಿಯು ದೇವಿಯ ಜನ್ಮ ನಕ್ಷತ್ರ ಎಂದು ವಿಜೃಂಭಣೆಯಿಂದ ಆಚಾರಿಸುತ್ತಾರೆ ನವರಾತ್ರಿಯಲ್ಲಿ ದೇವಿಗೆ 2 ಬಾರಿ ಅಭಿಷೇಕ ಹಾಗೂ ಕೃಷ್ಣಾ ಅಷ್ಟಮಿಗೆ 2 ಬಾರಿ ಅಭಿಷೇಕ ಮಾಡುತ್ತಾರೆ
ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನ
ಕೊಲ್ಲೂರು ಶ್ರೀ ಮುಕಾಂಬಿಕಾ ದೇವಸ್ಥಾನವು ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಪರಶುರಾಮ ಸೃಷ್ಟಿಸಿದ 7 ಮೋಕ್ಷದಾಮಗಳಲ್ಲಿ ಇದು ಕೂಡ ಸೇರಿದೆ. ಈ ಪ್ರಸಿದ್ಧ ದೇವಾಲಯವು ಕಲೆ ಮತ್ತು ಜ್ಞಾನಕ್ಕೆ ಸಮಾರ್ಪಿತಾವಾಗಿದೆ. ಕ್ಷೇತ್ರದಲ್ಲಿ ದೇವಿಯ ವಿಗ್ರಹವನ್ನು ಚಿನ್ನ ಬೆಳ್ಳಿ ಕಬ್ಬಿಣ ತಾಮ್ರ ಮತ್ತು ಸೀಸ ಎಂಬ ಪಂಚಾಲೋಹದಿಂದ ತಯಾರಿಸಲಾಗಿದೆ.
ಕೊಲ್ಲೂರು ಕ್ಷೇತ್ರವು 1200 ವರ್ಷಗಳ ಇತಿಹಾಸವನ್ನು ಹೊಂದಿದೆ. ಆದಿ ಶಂಕರಾಚಾರ್ಯರು ಸರಸ್ವತಿ ದೇವಿಯ ಪರಮಭಕ್ತರಾಗಿದ್ದರು ಇವರ ಭಕ್ತಿಗೆ ಮೆಚ್ಚಿ ದೇವಿಯು ಪ್ರತ್ಯಕ್ಷಗೊಂಡು. ಒಂದು ದೇವಾಲಯ ನೀರ್ಮಿಸುವಂತೆ ಸೂಚಿಸುತ್ತರೆ. ಆಗ ಶಂಕರಾಚಾರ್ಯರು ದೇವಾಲಯ ನೀರ್ಮಿಸಲು ಕೇರಳ ಕಡೆ ಸಾಗಿದರು. ದೇವಿಯು ಒಂದು ಶರತ್ತಿನ ಮೇಲೆ ಶಂಕರಾಚಾರ್ಯರೊಂದಿಗೆ ಬರಲು ಒಪ್ಪುತ್ತಾರೆ. ಅದೇನೆಂದರೆ ನೀನು ಹೋಗುವ ದಾರಿಯಲ್ಲಿ ನಾನು ನಿನ್ನನು ಹಿಂಬಾಲಿಸುತ್ತೇನೆ ಆದರೆ ನೀನು ಹಿಂದುರುಗಿ ನೋಡಬಾರದು. ಕೇರಳಕ್ಕೆ ಪ್ರಯಾಣಿಸುವಾಗ ದೇವಿಯು ಹಿಂದೆ ಬರುತ್ತಿದ್ದರೋ ಎಂದು ನೋಡಲು ಶಂಕರಾಚಾರ್ಯರು ಹಿಂದಿರುಗಿ ನೋಡುತ್ತಾರೆ ಆ ಸ್ಥಳವೇ “ಕೊಲ್ಲೂರು ”
ಮುಕಾಸುರನನ್ನು ಸಂಹಾರಿಸಿದ ನಂತರ ಮಾತೆಯನ್ನು ಮುಕಾಂಬಿಕೆ ಎಂದು ಕರೆಯುತ್ತಾರೆ. ಪಾರ್ವತಿ ದೇವಿಗೆ ಅರ್ಪಿತವಾದ ಏಕೈಕ ದೇವಸ್ಥಾನವಾಗಿದೆ. ಈ ಕ್ಷೇತ್ರದಲ್ಲಿ ದೇವಿಯನ್ನು ಶಕ್ತಿ ಮತ್ತು ಶಿವನ ಸಮ್ಮಿಲನವಾದ ಜ್ಯೋತಿರ್ಲಿಂಗ ರೂಪದಲ್ಲಿ ಕಾಣಬಹುದು. ಈ ಜ್ಯೋತಿರ್ಲಿಂಗದ ಬಲ ಅರ್ಧವು ಬ್ರಹ್ಮ, ವಿಷ್ಣು ಮತ್ತು ಶಿವನನ್ನು ಪ್ರತಿನಿಧಿಸುತ್ತದೆ. ಎಡ ಅರ್ಧವು ಪಾರ್ವತಿ ,ಲಕ್ಷ್ಮಿ ಮತ್ತು ಸರಸ್ವತಿಯನ್ನು ಪ್ರತಿನಿಧಿಸುತ್ತದೆ. ಕ್ಷೇತ್ರದಲ್ಲಿ ಶಂಕರಾಚಾರ್ಯರು ಹಾಕಿದ ಚೌಕಟ್ಟಿನಂತೆ ಪೂಜಾ ಕ್ರಮ ನಡೆಯುತ್ತದೆ.
ಕೊಲ್ಲೂರು ಕ್ಷೇತ್ರದಲ್ಲಿ ಮೂರು ಹೊತ್ತು ಉತ್ಸವ ನಾಲ್ಕು ಹೊತ್ತು ಪೂಜೆ ನಡೆಯುತ್ತದೆ. ದೇವಿಗೆ ಇಲ್ಲಿ ನಿತ್ಯೋತ್ಸವವನ್ನು ಕಾಣಬಹುದು. ಪ್ರತಿನಿತ್ಯ ಪ್ರದೋಷ ಪೂಜೆಯನ್ನು ಮಾಡುತ್ತಾರೆ. ಇಲ್ಲಿ ಕ್ಷೇತ್ರಪಾಲನಾಗಿ ವೀರಭದ್ರ ಸ್ವಾಮಿಯನ್ನು ಕಾಣಬಹುದು. ಕೊಲ್ಲೂರು ಕ್ಷೇತ್ರದಲ್ಲಿ ದೇವಿಗೆ ಆಗುವ ಎಲ್ಲಾ ಪೂಜೆಯನ್ನು ವೀರಭದ್ರ ಸ್ವಾಮಿಗೂ ಮಾಡುತ್ತಾರೆ. ಕ್ಷೇತ್ರದಲ್ಲಿ ನಡೆಯುವ ಪ್ರದಾನ ಸೇವೆಗಳು ಕುಂಕುಮರ್ಚನೆ,ರುದ್ರಾಭಿಷೇಕ ,ಪಂಚಾಮೃತಭಿಷೇಕ ,ಭಸ್ಮರ್ಚನೆ ,ಮಹಾತ್ರಿಮದುರನೈವೇದ್ಯಾ ,ಸರ್ವಸೇವೆ ,ಪ್ರತಃಪೂಜೆ, ಮಧ್ಯಾಹ್ನಪೂಜೆ, ಉದಯಸ್ತಾಮನಪೂಜೆ, ರಾತ್ರಿಪೂಜೆ ,ಮಹಾಪೂಜೆ ,ಚಂಡಿಕಾಹೋಮ ಮುಂತಾದ ಪೂಜೆಗಳು ನಡೆಯುತ್ತಾದೆ. ಪ್ರತಿದಿನ ಸುಮಾರು 14 ಚಂಡಿಕಾಹೋಮ ನಡೆಯುತ್ತದೆ.
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯ
ಪೊಳಲಿ ರಾಜರಾಜೇಶ್ವರಿ ದೇವಲಯವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೊಳಲಿ ಎಂಬಲ್ಲಿ ಮಂಗಳೂರು ನಗರದಿಂದ ಸುಮಾರು 19 ಕಿ.ಮೀ ದೂರದಲ್ಲಿದೆ. ಈ ದೇವಸ್ಥಾನವು ದೇವಿ ಲಲಿತ ತ್ರಿಪುರಸುಂದರಿಯ ಶಕ್ತಿಯ ರೂಪವಾದ ಶ್ರೀ ರಾಜರಾಜೇಶ್ವರಿಯವರಿಗೆ ಮೀಸಲಾದಂತಹ ಪುರಾತನ ಹಾಗೂ ಪ್ರಸದ್ದ ದೇವಸ್ಥಾನವಾಗಿದೆ. ಈ ತಾಯಿಯ ಮೂರ್ತಿಯು ಸುಮಾರು 10 ಅಡಿ ಎತ್ತರದ ಮಣ್ಣಿನಿಂದ ಮಾಡಲಾಗಿದ್ದು ಅದರಲ್ಲಿ ಔಷಧಿಯ ಗುಣವಿದೆ. ಇಲ್ಲಿ ಸುಬ್ರಮಣ್ಯ, ಭದ್ರಕಾಳಿ, ಮಹಾ ಗಣಪತಿ, ಮತ್ತು ಸರಸ್ವತಿ ದೇವಿಯನ್ನು ಕಾಣಬಹುದು.
ಪ್ರತಿ ವರ್ಷ ಮಾರ್ಚ್ನಲ್ಲಿ ವಾರ್ಷಿಕ ಜಾತ್ರೆ ಹಾಗೂ ದೇವಿ ಪೂಜೆಯ ಭಾಗವಾಗಿ "ಚೆಂಡು ಆಟ" ಇಲ್ಲಿನ ವಿಶೇಷ ಆಕರ್ಷಣೆ. ಇದು ಧರ್ಮ ಮತ್ತು ಅಧರ್ಮದ ನಡುವಿನ ಯುದ್ದದ ಪ್ರತೀಕವಾಗಿದೆ. ಈ ಚೆಂಡಾಟವು ಪಾರಂಪರಿಕ ರೀತಿಯಲ್ಲಿ ನಡೆಯುತ್ತದೆ. ಲೇಪಾಷ್ಟಗಂಧ ಇದು 12 ವರ್ಷಕ್ಕೊಮ್ಮೆ ನಡೆಯುವ ವೈಶಿಷ್ಟ್ಯ ಪೂರ್ಣ ಪೂಜೆ. ಇದರಲ್ಲಿ ದೇವಿಯ ಮೂರ್ತಿಗೆ 8 ಔಷಧೀಯ ಗುಣವಿರುವ ಮಣ್ಣಿನ ಲೇಪನವನ್ನು ಹಚ್ಚಲಾಗುತ್ತದೆ. ಈ ಮೂರ್ತಿ ಶತಮಾನಗಳಿಂದ ಭಕ್ತರ ಸೇವೆ ಮತ್ತು ನಂಬಿಕೆಯಿಂದ ಮೆರೆಯುತ್ತಿದೆ.
ನಮ್ಮ ಸಂಸ್ಕ್ರತಿ...ನಮ್ಮ ಹೆಮ್ಮೆ
ಜೈ ತುಳುನಾಡ್
Comments
Post a Comment