Posts

Showing posts from August, 2025

"ಪೌರಾಣಿಕ ಕಥೆಗಳ ಜೀವಂತ ರೂಪ- ಯಕ್ಷಗಾನ"

Image
 "ಪೌರಾಣಿಕ ಕಥೆಗಳ ಜೀವಂತ ರೂಪ- ಯಕ್ಷಗಾನ" ನಮಸ್ಕಾರ, 1. ಕರ್ನಾಟಕದ ಪ್ರಸಿದ್ದವಾದ ಜಾನಪದ ಕಲೆ ಯಕ್ಷಗಾನವು ಕರ್ನಾಟಕದ ಪ್ರಸಿದ್ದವಾದ ಜಾನಪದ ಕಲೆಯೊಂದಾಗಿದೆ. ಇದು ವಿಶೇಷವಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಕುಂದಾಪುರ ಭಾಗಗಳಲ್ಲಿ ಹಿಚ್ಚಿನ ಪ್ರಸಿದ್ದಿಯನ್ನು  ಪಡೆದಿದೆ. "ಯಕ್ಷ" ಎಂದರೆ ಪರಮಶಕ್ತಿಯ ಪ್ರತಿನಿಧಿ, ಗಾನ ಎಂದರೆ ಹಾಡು. ಈ ಕಲೆಯು ನಾಟಕ, ಸಂಗೀತ, ವೇಷಭೂಷಣ, ನೃತ್ಯ ಎಲ್ಲವೂ ಒಳಗೊಂಡಿರುವ ಒಂದು ಸಮಗ್ರ ಕಲಾರೂಪವಾಗಿದೆ. ಯಕ್ಷಗಾನವು ಸಾಮಾನ್ಯ ನಾಟಕವಲ್ಲ, ಇದು ಜನಸಾಮಾನ್ಯರ ಭಕ್ತಿ, ಭಾವನೆ, ಸಂಸ್ಕ್ರತಿ ಮತ್ತು ಮನರಂಜನೆಗಳ ಸಂಕಲನ. ಹಳ್ಳಿಗಳಲ್ಲಿ ದೇವರ ಜಾತ್ರೆ, ದೇಗುಲೋತ್ಸವ, ದೈವಾರಾಧನೆಗಳ ಸಮಯದಲ್ಲಿ ದಿನಪೂರ್ತಿ ನಡೆಯುವ ಯಕ್ಷಗಾನ ಪ್ರಸಂಗಗಳು ಗ್ರಾಮೀಣ ಸಮಾಜಕ್ಕೆ ಒಂದು ಮಹತ್ತರ ಸಾಂಸ್ಕ್ರತಿಕ ಹಬ್ಬವಾಗಿರುತ್ತವೆ. ಅದಕ್ಕಾಗಿ ಈ ಕಲೆಯನ್ನು "ಜೀವಂತ ನಾಟಕ" ಎಂದು ಹಲವರು ವರ್ಣಿಸುತ್ತಾರೆ.   ಮಹಿಷಾಸುರನ ವೇಷವು ಅತೀ ವೈಭವಶಾಲಿ, ದೊಡ್ಡ ಕಿರೀಟ, ಗಜಕೇಸರದಂತೆ ಭುಜಬಲ ಪ್ರದರ್ಶನ, ಗರಿಷ್ಠ ಆಭರಣಗಳಿಂದ ಕೂಡಿರುತ್ತದೆ. ಅವನ ವೇದಿಕೆಗೆ ಆಗಮನವು ಸಾಮಾನ್ಯವಾಗಿ ತಾಳಮದ್ದಳೆಯ ಘೋಷ, ಚಂಡೆಯ ಭರ್ಜರಿ ನಾದ, ಪಾತ್ರದಾರಿಯ ಗಂಭೀರ ಸಂಭಾಷಣೆ ಮತ್ತು ಭಯಾನಕ ನೃತ್ಯದೊಂದಿಗೆ ನಡೆಯುತ್ತದೆ. ಈ ದೃಶ್ಯವನ್ನು ನೋಡಲು ಜನರು ಮುಗಿ ಬಿದ್ದು ಸೇರುತ್ತಾರೆ. ವಿಶೇಷವಾಗಿ ಹಳ್ಳಿ ಜಾತ್ರೆಗಳಲ್ಲಿ ...

ಐತಿಹಾಸಿಕ ತಾಣ ಕೊಣಾಜೆ ಕಲ್ಲು

Image
  ಐತಿಹಾಸಿಕ ತಾಣ ಕೊಣಾಜೆ ಕಲ್ಲು...! ನಮಸ್ಕಾರ,  1. ಮೂಡಬಿದ್ರಿಯ ಹಸಿರು ತಪ್ಪಲಿನಲ್ಲಿ ಅಡಗಿರುವ ಪುಣ್ಯಸ್ಥಳ ನಮ್ಮೆಲ್ಲ ಪ್ರೀತಿಯ ಓದುಗರರಿಗೆ ಹೃದಯ ತುಂಬು ವಂದನೆಗಳು. ನೀವು ನಮ್ಮ ಮೇಲೆ ತೋರಿದ ಪ್ರೀತಿ ಮತ್ತು ಅಭಿಮಾನವೇ ವಿವಿಧ ವಿಷಯಗಳನ್ನು ಹುಡುಕಿ ತಿಳಿದು ಬರೆಯಲು ನಮಗೆ ಸದಾ ಪ್ರೇರಣೆಯಾಗುತ್ತದೆ.  ಇವತ್ತು ನಾವು ಪರಿಚಯಿಸಿಕೊಳ್ಳಲು ಪ್ರಯತ್ನಿಸುವ ವಿಷಯವೆಂದರೆ ಅದು ಮೂಡಬಿದ್ರಿಯ ಹಸಿರು ಪ್ರಕೃತಿ ತಪ್ಪಲಿನಲ್ಲಿ ಅಡಗಿರುವ ಕೊಣಾಜೆಕಲ್ಲು.  ಇದರ ಸ್ಥಳ, ಪುರಾಣ ಚರಿತ್ರೆಯನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಈ ಬರಹದ ಮೂಲಕ ಮಾಡುವೆವು 2. ಎತ್ತರ ಬೆಟ್ಟದ ತುದಿಯಲ್ಲಿರುವ ಗುಹಾ ದೇವಾಲಯ ದೇವಸ್ಥಾನ, ದೇಗುಲ ಎಂದರೆ ನಮಗೆ ನೆನಪಾಗುವುದು ವಿಶಾಲ ಪ್ರದೇಶ, ರಮಣೀಯ ವಾಸ್ತುಶಿಲ್ಪಾ, ನೀರಿನ ಕಲ್ಯಾಣಿಗಳು ,ಉದ್ದವಾದ ರಥಬೀದಿ, ಸುತ್ತಮುತ್ತ ಮಾರುಕಟ್ಟೆ ಇತ್ಯಾದಿ ಎಂಬ ಕಲ್ಪನೆಗಳು.  ಆದರೆ ನಮಗೆ ಈ ಮೂಡಬಿದ್ರಿಯ ಕೊಣಾಜೆಕಲ್ಲು ದೇವಸ್ಥಾನದಲ್ಲಿ ಇದು ಯಾವುದು ಕಾಣ ಸಿಗುವುದಿಲ್ಲ.  ಎತ್ತರವಾದ ಬೆಟ್ಟದ ತುದಿಯಲ್ಲಿ ನೆಲೆಸಿರುವ ದೇವಸ್ಥಾನವನ್ನು ನಾವಿಲ್ಲಿ ಕಾಣಬಹುದು.  ಇದನ್ನು ಹತ್ತಿ ತಲುಪಲು ನಮಗೆ ಗಂಟೆಗಳ ಪರಿಶ್ರಮವೇ ಬೇಕು. 3. ಕಾಳಭೈರವೇಶ್ವರ, ಭದ್ರಕಾಳಿ, ವನದುರ್ಗಿ – ದೇವರ ಸಾನಿಧ್ಯ ಕಾಲ್ನಡಿಗೆ ಮೂಲಕ ಬೆಟ್ಟವನ್ನು ಏರಿ ದೇವರ ದರ್ಶನವನ್ನು ಮಾಡಬೇಕು.  ಪ್ರಕೃತಿಯ ಅನನ್ಯ ದೃಶ್ಯ...

ತುಳುನಾಡ ಹೆಮ್ಮೆಯ ಜಾನಪದ ಕಲೆ ಹುಲಿವೇಷ

Image
  ತುಳುನಾಡ ಹೆಮ್ಮೆಯ ಜಾನಪದ ಕಲೆ ಹುಲಿವೇಷ   ನಮಸ್ಕಾರ,  1.  ತುಳುನಾಡಿನ ಜನಪದ ಕಲೆಗಳ ನೆಲೆ – ಹುಲಿವೇಷದ ವೈಶಿಷ್ಟ್ಯ ನಮ್ಮೆಲ್ಲ ಪ್ರೀತಿಯ ಓದುಗರರಿಗೆ ನಾವು ಮಾಡುವ ಹೃದಯ ತುಂಬು ನಮಸ್ಕಾರಗಳು.  ನೀವು ನಮ್ಮ ಮೇಲೆ ತೋರಿದ ಪ್ರೀತಿ ವಿಶ್ವಾಸಕ್ಕೆ ನಾವು ಸದಾ ಚಿರಋಣಿ. ತುಳುನಾಡಿನ ಜಾನಪದ ಕಲೆಯ ಮಹತ್ವಪೂರ್ಣ ಸ್ಥಾನ ಹೊಂದಿರುವ ಹುಲಿವೇಷದ ಬಗ್ಗೆ ಅರಿತುಕೊಳ್ಳೊಣ. ತುಳುನಾಡು ಪರಶುರಾಮ ಸೃಷ್ಟಯ ಅತ್ಯಂತ ಸುಂದರವಾದ ನಾಡು ಎಂದು ವಿಶೇಷ ಪ್ರಸಿದ್ದಿಯನ್ನು ಹೊಂದಿದೆ. 2. ಬಹಳಷ್ಟು ಹಳೆಯ ಬಾಷ ಪರಂಪರೆಯನ್ನು ಹೊಂದಿದೆ.  ನಾಗದೇವರ ದೈವಗಳ ಅನೇಕ ಶಕ್ತಿ ದೇವರುಗಳ ದೇವಸ್ಥಾನವನ್ನು ನಾವಿಲ್ಲಿ ಕಾಣಬಹುದು. ತುಳುನಾಡು ಬಹಳಷ್ಟು ಹಳೆಯ ಬಾಷ ಪರಂಪರೆಯನ್ನು ಹೊಂದಿದೆ.  ತನ್ನದೇ ಆದ ಲಿಪಿಯನ್ನು ಸಹ ಒಳಗೊಂಡು ಬಹಳ ಪುರತನ ಸಂಸ್ಕೃತಿಯನ್ನು ಹೊಂದಿದ ಶ್ರೀಮಂತ ನಾಡಾಗಿರುವ ತುಳುನಾಡು  ಅನೇಕ ಜಾನಪದ ಕಲೆಗಳ ನೆಲೆಯಾಗಿದ್ದು, ವೈವಿದ್ಯಮಯ ಜನಪದ ಪರಂಪರೆಯ ಧರೆಯಾಗಿದೆ. ಪ್ರತಿಷ್ಠಿತ ಕಂಬಳ, ದೈವ ದೇವರುಗಳಿಗೆ ಅರ್ಪಣೆಯಾದ ಬಲಿ ಕೋಲಾ, ಸಾಂಪ್ರದಾಯಿಕ ಜಾನಪದ ಕಲೆಯಾದ ಯಕ್ಷಗಾನದಂತೆ, ತುಳುನಾಡಿನಲ್ಲಿ ಹಲವಾರು ಆಚರಣೆಗಳು ಮನೆಮಾತಾಗಿವೆ. ಅದೇ ರೀತಿ, ಬಹಳ ಹಿಂದಿನಿಂದಲೂ ಪ್ರಸಿದ್ದಿಯಲ್ಲಿರುವ ಮತ್ತೊಂದು ಜನಪದ ನೃತ್ಯ ಎಂದರೆ ಅದು ತುಳುನಾಡಿನ ಹುಲಿವೇಷ.   3. ದಸರಾ ಹಬ್ಬದ ಕಳೆ ಹೆಚ್ಚಿಸುವ ಹುಲಿವ...