ತುಳುನಾಡಿನ ಜನಪ್ರಿಯ ಕ್ರೀಡೆ "ಕಂಬಳ"
ನಮಸ್ಕಾರ,
ನಮ್ಮ ಹೆಮ್ಮೆಯ ತುಳುನಾಡು ಪರಶುರಾಮ ಸೃಷ್ಟಿಯ ಸಂಸ್ಕೃತಿಯ ವಿಶ್ಟಿಷ್ಟ ಪ್ರಪಂಚ, ತನ್ನ ನೈರ್ಸಗಿಕ ಸೌಂದಯದೊಂದಿಗೆ ಹಸಿರು ಕಾಡುಗಳು, ನದಿ, ಸಮುದ್ರ ತೀರಗಳು ಮತ್ತು ಬೆಟ್ಟಗಳೊಂದಿಗೆ ಆಕರ್ಷಿಸುತ್ತದೆ. ಕರ್ನಾಟಕ ರಾಜ್ಯದಲ್ಲಿ ತುಳುನಾಡಿನ ಭಾಷೆ, ಸಂಸ್ಕೃತಿ, ಮತ್ತು ಕಲೆಯ ವಿಶೇಷತೆಗೆ ಹೆಚ್ಚಿನ ಮಹತ್ವವಿದೆ, ಕರಾವಳಿ ಪ್ರದೇಶವಾದ ಕಾರಣ ಇಲ್ಲಿ ಸಮುದ್ರಾಹಾರವು ವಿಶೇಷ. ಇಲ್ಲಿನ ಜನರ ಜೀವನ ಶೈಲಿಯೆ ವಿಭಿನ್ನ. ಯಕ್ಷಗಾನ, ಕಂಬಳ, ದೈವಾರಾಧನೆ, ಮತ್ತು ನಾಗಾರಾಧನೆ ಇಲ್ಲಿನ ಪ್ರಮುಖ ಆಚರಣೆಗಳು. ಇದರಲ್ಲಿ ಒಂದು ತುಳುನಾಡಿನ ಜನಪ್ರಿಯ ಕ್ರೀಡೆ "ಕಂಬಳ". ಕಂಬಳವು ಪ್ರಮುಖ ಆಚರಣೆಯ ಕ್ರೀಡೆ ಎನ್ನಬಹುದು. ತುಳುನಾಡಿನ ಪ್ರತಿಯೊಬ್ಬರಿಗೂ ಕಂಬಳ ಎಂದರೆ ಅಚ್ಚುಮೆಚ್ಚು.
ಕೃಷಿ ಮತ್ತು ಸಂಪ್ರದಾಯಿಕ ಆಚರಣೆಗೆ ಸೀಮಿತವಾದ ಕಂಬಳ ಇಂದು ತುಳುನಾಡಿನ ಹಲವು ಜನರ ಪ್ರತಿಷ್ಠೆಯ ಕಣವಾಗಿದೆ. ಕಂಬಳವನ್ನು ನೋಡಲು ಸಾವಿರಾರು ಪ್ರೇಕ್ಷಕರು ಭಾಗವಹಿಸುತ್ತಾರೆ. ಆಧುನಿಕತೆಯ ಸ್ಪರ್ಷದಿಂದಾಗಿ ಕಂಬಳವು ಜೋಡು ಕರೆಗೆ ಬಂದು ಕೋಣಗಳು ಪೈಪೋಟಿ ಮಾಡುವವರೆಗೆ ಬಂದು ನಿಂತಿದೆ. ಕೃಷಿಗಾಗಿ ಭೂಮಿಯನ್ನು ಸಮತಟ್ಟುಗೊಳಿಸಲು ಕೋಣಗಳ ಮುಖಾಂತರ ಉಳುಮೆ ಮಾಡುತ್ತಿದ್ದರು. ಸಣ್ಣ ರೈತರಿಗೆ 1, 2 ಎಕ್ಕರೆ ಕಂಬಳ ಗದ್ದೆ ಆದರೆ ಗುತ್ತು ಬರ್ಕೆ ಭಾವ ಸೀಮೆ ಇಂತಹ ದೊಡ್ಡ ವ್ಯಕ್ತಿಗಳಿಗೆ 30 ಎಕ್ಕರೆ ತನಕ ಕಂಬಳ ಗದ್ದೆ ಇತ್ತು. ಹಾಕಿದ ಗೊಬ್ಬರ, ಕಟ್ಟಿದ ನೀರು, ಮತ್ತು ಬೆಳೆದ ಬೆಳೆಗೆ ಸಮಪ್ರಮಾಣದಲ್ಲಿ ಸಿಗುವಂತೆ ಮಾಡಲು ಭೂಮಿಯನ್ನು ಉಳುಮೆ ಮಾಡುತ್ತಿದ್ದರು.
ಹೀಗೆ ಎಂಟು ಹತ್ತು ಎಕ್ಕರೆ ಭೂಮಿಯನ್ನು ಜನರೆ ಉಳುಮೆ ಮಾಡಿ ಕಂಬಳಗದ್ದೆಯನ್ನಾಗಿ ಮಾಡಿದರು. ಇದು ಕೇವಲ ಬಾಯಿ ಮಾತು ಮಾತ್ರವಲ್ಲದೆ ಇದನ್ನು ಅಂದಿನ ಕಾಲದ ಶಾಸನಗಳಲ್ಲಿ ಉಲ್ಲೇಖ ಮಾಡಿದ್ದಾರೆ. ತಾಳಿಪಾಡಿಯ ಶಾಸನ, ಶೃಂಗೇರಿಯ ಶಾಸನ, ಕಲ್ಲು ಮಾಗಣೆಯ ಶಾಸನ ಹೀಗೆ ಹಲವು ಶಾಸನಗಳು ಕಂಬಳ ಗದ್ದೆಯ ವಿಸ್ತೀರ್ಣ ಹಾಗು ಇತಿಹಾಸವನ್ನು ನಮಗೆ ತಿಳಿಸುತ್ತದೆ. ಈ ಕಂಬಳದ ಬೆಳೆ ರೈತನ ಆದಾಯ ತಿಳಿಸುತ್ತ ಸ್ಥಾನಮಾನವನ್ನು ನಿರ್ಧರಿಸುತ್ತಿತ್ತು. ಕಂಬಳವು ಕೇವಲ ಮನರಂಜನೆ ಮಾತ್ರವಲ್ಲದೆ, ತುಳುನಾಡಿನ ಸಂಸ್ಕ್ರತಿ ಮತ್ತು ಪರಂಪರೆಯ ಪ್ರತೀಕವು ಹೌದು.
ಅದ್ದೂರಿ ಸಮಾರಂಭ, ಉತ್ಸವದ ವಾತವರಣದ ಕಂಬಳ, ಜಾತ್ರೆ ರೀತಿಯಲ್ಲಿ ನಡೆಯುತ್ತದೆ. ಮುಲ್ಕಿಯಲ್ಲಿ ಸುಮಾರು ಒಂದು ತಿಂಗಳು ಕಂಬಳ ನಡೆಯುತ್ತಿತ್ತು. ಹಿಂದಿನ ಕಾಲದಲ್ಲಿ ಕಂಬಳ ಎಂದರೆ ಆ ಊರಿನ ಜಾತ್ರೆ ಎನ್ನಬಹುದು ಏಕೆಂದರೆ ಒಮ್ಮೆ ಕಂಬಳಕ್ಕೆ ದಿನ ನಿಗದಿಯಾದ ನಂತರ ಆ ಊರಿನಲ್ಲಿ ಶುಭಕಾರ್ಯ ನಡೆಸುವಂತಿಲ್ಲ, ಅಷ್ಟೊಂದು ಪ್ರಾಮುಖ್ಯತೆಯನ್ನು ಕಂಬಳ ಪಡೆದಿತ್ತು. ತಮ್ಮ ಗದ್ದೆಯಲ್ಲಿ ಬೆಳೆದ ಬೆಳೆಯನ್ನು ಸ್ವಲ್ಪ ಪ್ರಮಾಣದಲ್ಲಿ ಬಹುಮಾನವಾಗಿ ನೀಡುತ್ತಿದ್ದರು. ಇದೀಗ ಆಧುನಿಕ ಕಂಬಳ ಪ್ರಾರಂಭಗೊಂಡ ನಂತರ ಬಂಗಾರವನ್ನು ಬಹುಮಾನವಾಗಿ ನೀಡಲಾಗುತ್ತದೆ.
ಇಂದಿಗೂ ಆಧುನಿಕ ಕಂಬಳ ಪ್ರಾರಂಭವಾದ ನಂತರವು ಕೂಡ ಮುಲ್ಕಿ ಸೀಮೆ ಅರಸು ಕಂಬಳದಲ್ಲಿ ಬಂಗಾರವನ್ನು ಬಹುಮಾನವಾಗಿ ನೀಡುವ ಕ್ರಮವಿದ್ದರು ಅಲ್ಲಿನ ಪ್ರಾಮುಖ್ಯತೆ ಎಲೆ ಅಡಿಕೆ ಮತ್ತು ಎರಡು ನಿಂಬೆಹಣ್ಣಿಗೆ ಮಾತ್ರ. ಕಾರ್ಕಳದ ಬಜಗೋಳಿಯ ಕಂಬಳದ ನಂತರ ಕಂಬಳಕ್ಕೆ ಒಂದು ಹೊಸ ಆಯಾಮ ಸಿಕ್ಕಿತು, ಎಂದರೆ ತಪ್ಪಗಲಾರದು. ಹೀಗಾಗಿ ಕೇವಲ ಎರಡು ವಿಭಾಗ ಮಾತ್ರ ಕಂಬಳದಲ್ಲಿ ಇತ್ತು . 1970ರಲ್ಲಿ ಕಾರ್ಕಳದ ಬಜಗೋಳಿಯ ದಿಡಿಂಬಿರಿ ಎಂಬಲ್ಲಿ ದೇವಸ್ಥಾನದ ಧ್ವಜಸ್ತಂಭಕ್ಕೆ ತಾಮ್ರದ ಹೊದಿಕೆ ಮಾಡುವ ಉದ್ದೇಶದಿಂದ ಶ್ರೀಯುತ ಗುಣಪಾಲ್ ಮತ್ತು ಧರ್ಮರಾಜ್ ರವರು ಬಜಗೋಳಿಯಲ್ಲಿ ಲವ-ಕುಶ ಕಂಬಳವನ್ನು ತಾಮ್ರದ ಹೊದಿಕೆ ಮಾಡುವ ಉದ್ದೇಶದಿಂದ ಕಂಬಳಕ್ಕೆ ಟಿಕೆಟ್ ಮಾಡಿದರು ಕನೆಹಲಗೆ ಮತ್ತು ಹಗ್ಗ ವಿಭಾಗ ಮಾತ್ರ ಇತ್ತು. ಬಜಗೋಳಿಯ ಕಂಬಳದ ನಂತರ ಅಡ್ಡ ಹಲಗ ಮತ್ತು ನೇಗಿಲು ವಿಭಾಗವನ್ನು ಸೇರಿಸಿದರು. ಹೀಗಾಗಿ ಕಂಬಳ ತನ್ನದೇ ಆದ ಹೊಸ ರೂಪವನ್ನು ಮತ್ತು ಹೊಸ ತಿರುವನ್ನು ಪಡೆದುಕೊಂಡಿತು. ವಿಜೇತರಿಗೆ ಪವನ್ ಬಂಗಾರವನ್ನು ನೀಡಲಾಯಿತು.
ಈ ಕಾಲಘಟ್ಟದಲ್ಲಿ ಹಲವಾರು ಆಧುನಿಕ ಕಂಬಳಗಳಿವೆ, ಅರಸು ಕಂಬಳ, ದೈವದ ಕಂಬಳ, ಹೀಗೆ ಕಂಬಳವು ತನ್ನ ಬೇರನ್ನು ತುಳುನಾಡಿನಾದ್ಯಂತ ವಿಶಾಲವಾಗಿ ಹಬ್ಬಿಕೊಂಡಿದೆ. ಈಗಿನ ಕಾಲದ ಕಂಬಳ ಕೇವಲ ರೈತರು ಮಾತ್ರವಲ್ಲದೆ ಆಸಕ್ತರು ಕೋಣಗಳನ್ನು ಕಂಬಳದಲ್ಲಿ ಒಡಿಸುತ್ತಾರೆ. ಈ ಕಂಬಳಕ್ಕೆ ತುಂಬಾ ಹಣವೆಚ್ಚವಾಗುತ್ತದೆ. ಏಕೆಂದರೆ ಕೋಣವನ್ನು ತಮ್ಮ ಸ್ವಂತ ಮಕ್ಕಳಿಗಿಂತಲೂ ಹೆಚ್ಚಾಗಿ ನೋಡಿಕೊಳ್ಳಬೇಕು. ಈ ಕ್ರೀಡೆಯಲ್ಲಿ ಗೆದ್ದರೂ ಸೋತರು ಅದೇ ಹುಮ್ಮಸ್ಸಿನಿಂದ ತಮ್ಮ ತಮ್ಮ ಕೋಣಗಳನ್ನು ಮುದ್ದಿನಿಂದ ಸಾಕುತ್ತಾರೆ. ಇಲ್ಲಿ ಕೋಣವನ್ನು ಹೇಗೆ ಸಾಕುತ್ತಾರೆ ಎನ್ನುದಕ್ಕಿಂತ ಅವರ ಕಂಬಳದ ಮೇಲಿನ ಅಭಿಮಾನ, ಒಲವು ಮತ್ತು ಕಂಬಳವನ್ನು ಉಳಿಸಬೇಕೆಂಬ ಹಠ ಪ್ರತಿಯೊಬ್ಬ ತುಳುನಾಡಿನ ಜನರಲ್ಲಿಯು ಇದೆ.
ಇಷ್ಷೊಂದು ಮಹತ್ವಪೂರ್ಣ ಆಚರಣೆಯ ಕಂಬಳವು ಸಹ ಹಲವಾರು ಏಳು ಬೀಳುಗಳನ್ನು ಕಂಡಿತು. 2014ರಲ್ಲಿ ಪ್ರಾಣಿಗಳ ಹಿಂಸಾತ್ಮಕ ಕ್ರೀಡೆ ಎಂದು ನಿಷೇಧಿಸಲಾಗಿತ್ತು. 2017ರಲ್ಲಿ ಜನರ ಹೋರಾಟದಿಂದಾಗಿ ಸರ್ಕಾರದಿಂದ ಅನುಮತಿ ಸಿಕ್ಕಿತು. ಈ ನಡುವೆಯೂ ತಮ್ಮ ಕೋಣಗಳ ಯಜಮಾನರು ಅಷ್ಟೆ ಪ್ರೀತಿಯಿಂದ ಕೋಣಗಳನ್ನು ನೋಡಿಕೊಂಡಿದ್ದಾರೆ. ಇದರಲ್ಲಿ ತಿಳಿಯಬಹುದೇನೆಂದರೆ ತುಳುನಾಡಿನ ಜನರಿಗೆ ಕಂಬಳದ ಮೇಲಿರುವ ಅಭಿಮಾನ. ನಮಗೆ ಅಲ್ಲಿ ಗೆದ್ದರೆ ಸಿಗುವ ಪವನ್ ಬಂಗಾರ ಮುಖ್ಯವಲ್ಲ, ನಮಗೆ ನಮ್ಮ ಕೋಣಗಳು ಮುಖ್ಯ, ಕಂಬಳ ಮುಖ್ಯ, ನಮ್ಮ ಸಂಸ್ಕ್ರತಿ ಮುಖ್ಯವೆಂಬ ಭಾವನೆ.
ಕಂಬಳದ ಕೋಣಗಳು ಯಾವ ಸೆಲೆಬ್ರಿಟಿಗಳಿಗೂ ಕಮ್ಮಿಯಿಲ್ಲ ಕೆಲವು ಕೋಣಗಳು ಕಂಬಳದಲ್ಲಿ ಮಾಡಿರುವ ಹೆಸರು, ಮನುಷ್ಯರಾಗಿ ನಮ್ಮಿಂದ ಮಾಡಲು ಸಾದ್ಯವಿಲ್ಲ. ಸಿಲಿಕಾನ್ ಸಿಟಿ ಬೆಂಗಳೂರಿಗೆ ಕಂಬಳ ಕಾಲಿಟ್ಟಿದೆ. ಕಂಬಳವು ರಾಜ್ಯ ರಾಜದಾನಿಯಲ್ಲಿ ಪ್ರದರ್ಶನಗೊಳ್ಳುತ್ತದೆ ಎಂದರೆ ಕಂಬಳವು ಎಷ್ಟೊ ಎತ್ತರವನ್ನು ಮುಟ್ಟಿದೆ. ಇದು ಕೇವಲ ಕಂಬಳದ ಗೆಲುವಲ್ಲ ನಮ್ಮ ತುಳುನಾಡಿನ ಗೆಲುವು ಎಂದರೆ ತಪ್ಪಲ್ಲ. ನಮ್ಮ ಸಂಪ್ರಾದಾಯ ಇದನ್ನು ಇನ್ನಷ್ಟು ಬಲಪಡಿಸುವುದು ತುಳುವರಾಗಿ ತುಳು ನಾಡಿನ ಜನರಾಗಿ ನಮ್ಮೆಲ್ಲರ ಬಹುಮುಖ್ಯ ಕರ್ತವ್ಯ.
ಸುಮಾರು 24 ಅಧುನಿಕ ಕಂಬಳ ನಡೆಯುತ್ತಿವೆ. ಇದರ ಜೊತೆಗೆ ಸಾಂಪ್ರಾದಾಯಿಕ ಕಂಬಳಗಳು ನಡೆಯುತ್ತದೆ ಕುಂದಾಪುರದ ಕಡೆ ಬೇರೆಯೇ ರೀತಿಯಲ್ಲಿ ಕಂಬಳ ನಡೆಯುತ್ತದೆ. ಕಂಬಳವನ್ನು ನೇರ ಪ್ರಸಾರದ ಮೂಲಕ ನೋಡಬಹುದು. ಒಂದು ಸಾಂಪ್ರದಾಯಕ್ಕೆ ಸೀಮಿತವಗಿದ್ದ ಕಂಬಳ ಇಂದು ಇಷ್ಟು ದೊಡ್ಡ ಮಟ್ಟಿಗೆ ಹೆಸರು ಮಾಡುತ್ತಿದೆ ಎಂದರೆ ಅದಕ್ಕೆ ತುಳುನಾಡಿನ ಜನರ ಪ್ರೀತಿಯೇ ಸಾಕ್ಷಿ ಹಾಗೆಯೆ ಆ ದೈವದೇವರ ಆರ್ಶಿವಾದ, "ಹೀಗೆ ಕಂಬಳದ ಮೇಲೆ ಪ್ರೀತಿ ಇರಲಿ, ಇನ್ನೂ ದೊಡ್ಡ ಮಟ್ಟಿನಲ್ಲಿ ಹೆಸರು ಮಾಡಲಿ"
ನಮ್ಮ ಸಂಸ್ಕ್ರತಿ ನಮ್ಮ ಹೆಮ್ಮೆ
ಜೈ ತುಳುನಾಡ್
❤️nice imformation
ReplyDeleteRealyy appreciate,❤️
ReplyDeleteSoopar
ReplyDeleteNice 👍
ReplyDelete