ದೇವಿ ಪುಣ್ಯ ಕ್ಷೇತ್ರಗಳ...ಭಕ್ತಿಯ ಪಯಣ

ದೇವಿ ಪುಣ್ಯ ಕ್ಷೇತ್ರಗಳ...ಭಕ್ತಿಯ ಪಯಣ ನಮಸ್ಕಾರ, ಕರಾವಳಿಯಲ್ಲಿ ಕಟೀಲ್ದಪ್ಪೆ ಎಂದೇ ಪ್ರಸಿದ್ಧಿ ಹೊಂದಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ತಾಯಿ, ಅಪಾರ ಭಕ್ತರನ್ನು ತನ್ನತ್ತ ಸೆಳೆಯುತ್ತಾಳೆ. ಆರು ಕಾಲುಗಳನ್ನು ಹೊಂದಿರುವ ದುಂಬಿಯಾಗಿ, ಭ್ರಮರಾಂಬಿಕೆಯ ರೂಪದಲ್ಲಿ ಅರುಣಾಸುರನನ್ನು ಸಂಹರಿಸುತ್ತಾಳೆ. ಆದಿ ಶಕ್ತಿಯನ್ನು ನಂದಿನಿಯ ಕುಟಿಯ ಲಿಂಗ ಸ್ವರೂಪದಲ್ಲಿ ಕಾಣಬಹುದು. ದೇವಸ್ಥಾನದಲ್ಲಿ ಲಿಂಗ ಸ್ವರೂಪಕ್ಕೆ ಅಭಿಷೇಕ ನಡೆಯುತ್ತದೆ. ನಂದಿನಿ ನದಿಯಲ್ಲಿ 2 ದ್ವೀಪಗಳಿವೆ- ಒಂದು ದೇವಿಯ ಮೂಲ ಸ್ಥಾನ, ಮತ್ತೊಂದು ಈಗೀನ ಪ್ರಸಿದ್ಧವಾದ ಕಟೀಲು ಕ್ಷೇತ್ರ ಮೂಲ ಕ್ಷೇತ್ರವಾಗಿದ್ದು, ಅರುಣಾಸುರನನ್ನು ಸಂಹರಿಸಿದ ದೇವಿಯನ್ನು ಎಳನೀರಿನ ಅಭಿಷೇಕ ಮಾಡಿ ಶಾಂತ ರೂಪಕ್ಕೆ ತಂದು ಪೂಜಿಸುತ್ತಾರೆ. ಶುಕ್ರವಾರ 800 ರಿಂದ 1000 ಎಳನೀರು ಭಕ್ತರಿಂದ ದೇವಿಗೆ ಸೇರುತ್ತದೆ. ಈ ಕ್ಷೇತ್ರದಲ್ಲಿ 2 ಹೊತ್ತು ಪೂಜೆ ಹಾಗೂ ಪ್ರಸಾದದ ರೂಪದಲ್ಲಿ ಅನ್ನದಾನ ನಡೆಯುತ್ತದೆ. ಇಲ್ಲಿ ನಂದಿನಿ ನದಿ 16 ಮೈಲು ಉಗಮಿಸಿ, ಮತ್ತಷ್ಟು 16 ಮೈಲುಗಳ ಆಚೆ ಸಮುದ್ರ ಸೇರುತ್ತದೆ. ನಂದಿನಿಯ ಮದ್ಯೆ ಭಾಗದಲ್ಲಿ ಉದ್ಭವಿಸಿದ್ದರಿಂದ ಇದನ್ನು "ಕಟಿ ಪ್ರದೇಶ"ವೆಂದು ಹೇಳುತ್ತಾರೆ. ಹೀಗಾಗಿ ಈ ಸ್ಥಳಕ್ಕೆ ಕಟೀಲು ಎಂಬ ಹೆಸರು ಬಂತು. 1927ನೇ ಇಸವಿಯಲ್ಲಿ ಕಟೀಲು ಕ್ಷೇತ್ರಕ್ಕೆ ಶರೂರು ಮಠದೀಶರು ಭೇಟಿ ನೀಡಿ, "ಹ್ಯಾದ್ರಿ ಖಂಡ " ಎಂಬ ತಾಳೆ ...