"ಕಂಬಳ ಕ್ಷೇತ್ರದ ಸಾದಕ, ಚಾಂಪಿಯನ್ ದೂಜ"
"ಕಂಬಳ ಕ್ಷೇತ್ರದ ಸಾದಕ, ಚಾಂಪಿಯನ್ ದೂಜ"
ನಮಸ್ಕಾರ ;
ನಮ್ಮ ಪ್ರೀತಿಯ ಓದುಗರರಿಗೆ ನಾವು ಮಾಡುವ ಹೃದಯಪೂರ್ವಕ ನಮಸ್ಕಾರ. ಇದುವರೆಗೆ ನಮ್ಮ ಲೇಕನಗಳನ್ನು ಓದಿ ಪ್ರೋತ್ಸಾಹಿಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು. ನೀವು ತೋರಿಸಿರುವ ಪ್ರೀತಿ ಮತ್ತು ಬೆಂಬಲ ನಮಗೆ ಹೊಸ ವಿಷಯಗಳನ್ನು ಬರೆಯಲು ಸದಾ ಸ್ಪೂರ್ತಿ ನೀಡುತ್ತಿದೆ. ಈಗ ಬರೆಯುವ ವಿಷಯ ನಮಗೆ ಬರೆಯಲು ಅಷ್ಟು ಗೊತ್ತಿಲ್ಲವಾದರೂ, ತಿಳಿದಷ್ಟು ತಿಳಿಸುವ ಉತ್ಸಹದಿಂದ ಬರೆಯುತ್ತಿದ್ದೆವೆ.
ನಮ್ಮ ಹೆಮ್ಮೆಯ ತುಳುನಾಡು ಸಾವಿರ ಎಸಲಿನ ತಾವರೆ ಎಂದರೆ ತಪ್ಪಾಗಲಾರದು. ನಾನಾ ತರದ ವಿಶೇಷ ಸಂಸ್ಕೃತಿಕ ಸಂಪ್ರದಾಯಿಕ ಕಲೆಗೆ ಹೆಸರುವಾಸಿ. ದೈವ ಕೋಲಾ, ನಾಗರಾಧನೆ, ಯಕ್ಷಗಾನ ಕಂಬಳ ಇಂತಹ ಸಂಪ್ರದಾಯಿಕ ಕಲೆಯ ತವರೂರಾಗಿದೆ. ಈ ತುಳುನಾಡು ಬೌಗೋಳಿಕವಾಗಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕಾಸರಗೋಡು ಜಿಲ್ಲೆಗಳವರೆಗೆ ವಿಸ್ತರವಾಗಿದೆ.
ತುಳುನಾಡಿನ ಪ್ರಮುಖ ಸಂಪ್ರದಾಯಿಕ ಕ್ರೀಡೆ ಎಂದರೆ ಅದು ಕಂಬಳ. ದಷ್ಟಪುಷ್ಟವಾಗಿ ಬೆಳೆದ ಕೋಣಗಳನ್ನು ಹಾಸನಾಗಿ ಹದಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ಹಿಂದೆ ರೈತಪಿ ಜನರು ಮನರಂಜನೆಗಾಗಿ ಈ ಕಂಬಳ ಕ್ರೀಡೆ ಏರ್ಪಡಿಸುತ್ತಿದ್ದರು. ಆದರೆ ಕಳೆದ ವರ್ಷಗಳಿಂದ ಸಾಂಘಿಕಾ ಬಲದಿಂದ ಕಂಬಳ ಕ್ರೀಡೆ ನಡೆದು ಬರುತ್ತಿದೆ. ಈ ಕ್ರೀಡೆಯಲ್ಲಿ ಕೋಣಗಳ ಶಕ್ತಿ ಮತ್ತು ಓಡಿಸುವವರ ನಿಪುಣತೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ.
ಈ ಕಂಬಳದ ಕೋಣಗಳನ್ನು ಸಾಕುವುದು ಅಷ್ಟು ಸಾಮಾನ್ಯವಾದ ಮಾತಲ್ಲ. ಒಳ್ಳೆಯ ಕೋಣವನ್ನು ಆಯ್ಕೆ ಮಾಡಿ , ಚೆನ್ನಾಗಿ ಆರೈಕೆ ಮಾಡಿ ಕಂಬಳಕ್ಕೆ ತಯಾರಿಸುವುದರ ಜೊತೆಗೆ, ಅಂತಹ ಕೋಣಗಳನ್ನು ಓಡಿಸಲು ಜನರನ್ನು ತಯಾರಿಸುವ ಜವ್ದಾರಿ ಕೋಣದ ಯಜಮಾನಿಗೆ ಇರುತ್ತದೆ. ಈ ಕಂಬಳದ ಕೋಣವನ್ನು ತಮ್ಮ ಮಕ್ಕಳಂತೆ ಸಾಕುತ್ತಾರೆ. ಸಕಲ ಸೌಕರ್ಯಗಳನ್ನು ಕಲ್ಪಿಸಿ ಅದನ್ನು ಪೋಷಿಸುತ್ತಾರೆ. ತನ್ನನು ಅತ್ಯಂತ ಪ್ರೀತಿಯಿಂದ ಸಾಕಿದ ಯಜಮಾನನ ಹೆಸರನ್ನು ಉಳಿಸಲು ಗೌರವವನ್ನು ಕಾಪಾಡಲು ಪ್ರತಿಷ್ಠೆಯನ್ನು ಹೆಚ್ಚಿಸಲು ಆ ಕೋಣಗಳು ತಮ್ಮ ಸಾಮರ್ಥ್ಯ ಮೀರಿ ಪ್ರಯತ್ನಿಸುತ್ತದೆ. ಈ ಕಂಬಳದ ಕೆಲವೊಂದು ಕೋಣಗಳು ಸಾವಿರಾರು ಅಭಿಮಾನಿಗಳನ್ನು ಸಂಪಾದಿಸಿವೆ. ಇಂತಹ ಕೋಣಗಳ ಪೈಕಿ “ಪದವು ಕನಡ್ಕ ಪ್ರಾಂನ್ಸಿಸ್ ಪ್ಲೇವಿ ಡಿಸೋಜ ”ಇವರ ತಂಡದ ಹೆಸರನ್ನು ಗಗನಕ್ಕೆ ಹಾರಿಸಿದ “ಚಾಂಪಿಯನ್ ದೂಜ”ನದ್ದೇ ದೊಡ್ಡ ಅಧ್ಯಾಯ. ಕಂಬಳ ಕ್ಷೇತ್ರದ ಸಾದಕ, ಕಂಬಳದ ವೇಗದೂತ, ಸಂಗೀತ ಪ್ರೇಮಿ ,ತುಳುವಿನಲ್ಲಿ ಹೇಳಬೇಕೆಂದರೆ ಸೇಲೆದ ಬಿರ್ಸೆ ” ನಮ್ಮ ದೂಜ.
ದೂಜ ಕಂಬಳದಲ್ಲಿ ಅನೇಕ ಅಭಿಮಾನಿಗಳನ್ನು ಸಂಪಾದಿಸಿದ ಕೋಣ. ದೂಜ ಓಡಿದ ಕೆಲವು ಓಟಗಳು ಇಂದಿಗೂ ಅವನ ಅಭಿಮಾನಿಗಳ ಮನಸಿನಲ್ಲಿ ಮಾಸದ ನೆನಪಾಗಿ ಉಳಿದಿದೆ. ದೂಜ ತನ್ನ ಸಹ ಓಟಗಾರ “ಹೇರ್ರ್ಮುಂಡೇ ಮೋಡ “ನೊಂದಿಗೆ ಓಡಿ ಸರಣಿ ಗೆದ್ದ ಕ್ಷಣ ಇಂದಿಗೂ ನೆನಪು ಹಾಗೆಯೇ ಇದೆ. ”ಪದವು ಕನಡ್ಕ“ ತಂಡದ ಹೆಸರನ್ನು ಬಾನೆತ್ತರಕ್ಕೆ ಹಾರಿಸಿದ ಕೀರ್ತಿ ದೂಜನಿಗೆ ಸಲ್ಲುತ್ತದೆ. ಒಂದು ಕೊಂಬಿನ ಸ್ವರಕ್ಕೆ (ಕಹಳೆಯ ಸ್ವರಕ್ಕೆ ) ತಲೆಯಾಡಿಸುವ ಕೋಣ ಎಂದರೆ ಅದು ನಮ್ಮ ದೂಜ. ಸುಮಾರು 69 ಪದಕ ಮತ್ತು 6 ವರ್ಷ ಚಾಂಪಿಯನ್ ಆಗಿ ಕಂಬಳದ ಕೂಟದಲ್ಲಿ ಮೆರೆದ ದೂಜನ ಹಿನ್ನಲೆ ನಾವು ತಿಳಿದುಕೊಳ್ಳೋಣ.
ತುಳುನಾಡಿನಲ್ಲಿ ಕೋಣಗಳೇ ಸೆಲೆಬ್ರಿಟಿಗಳು ಕಂಬಳದ ಸಮಯದಲ್ಲಿ ಸ್ಟೇಜ್ ಮೇಲೆ ಎಷ್ಟೇ ದೊಡ್ಡ ಸೆಲೆಬ್ರಿಟಿಗಳಿದ್ದರು, ಅಲ್ಲಿನ ಜನರ ಗಮನ ಕಂಬಳದಲ್ಲಿ ಬರುವ ಕೋಣಗಳ ಮೇಲೆಯೇ ಇರುತ್ತದೆ. ದೂಜನ ಹಿನ್ನಲೆ ನಮಗೆ ಗೊತ್ತಿರುವಷ್ಟು ತಿಳಿಸುವ ಸಣ್ಣ ಪ್ರಯತ್ನ ಅಷ್ಟೇ. ದೂಜನ ಹಿನ್ನಲೆ ನೋಡುವುದಾದರೆ, ಸಿರಾಜ್ ಎಂಬುವವರಿಂದ ಪೈರಿನಿಂದ (ಪೈರು ಎಂದರೆ ಕಂಬಳದ ಕೋಣಗಳನ್ನು ಖರೀದಿಸುವ ಜಾಗ )ಇಬ್ರಾಹಿಂ ಕಾಕಾ ರವರಿಂದ ಖರೀದಿ ಮಾಡಿದರು. ಆಗ ಸಣ್ಣ ಪ್ರಾಯದ ಮರಿ ಕೋಣವನ್ನು ಕುದಿಯಲ್ಲಿ (ಕುದಿ ಎಂದರೆ ಕಂಬಳಕ್ಕೆ ಕೋಣವನ್ನು ತಯಾರಿ ಮಾಡುವುದು) ಇಬ್ರಾಹಿಂ ಅವರಿಗೆ ಪಲಾಗಿಸಲು ಆಗುವುದಿಲ್ಲ. ನಂತರ ಸುಮಾರು 60 ಸಾವಿರಕ್ಕೆ ದೂಜಾನೊಂದಿಗೆ ಇನ್ನೊಂದು ಕೋಣವನ್ನು ಅಳದಂಗಡಿ ರವಿಕುಮಾರ್ ಎಂಬುವವರಿಗೆ ಜೋಡಿ ಮಾರಿದರು. ಈ ಅಳದಂಗಡಿ ರವಿ ಕುಮಾರ್ ಕಂಬಳದಲ್ಲಿ ಪ್ರಶಸ್ತಿಯನ್ನು ಪಡೆದ ಅನುಭವಿ ಓಟಗಾರರು ಕೂಡ ಹೌದು. ನಂತರ ರವಿಕುಮರ್ ರವರ ಬಳಿ 8 ತಿಂಗಳುಗಳ ಕಾಲ ಇದ್ದ. ಅದರ ನಂತರ ಪದವು ಕನಡ್ಕದ ಯಜಮಾನರು ಮೂಡಬಿದ್ರೆ ಕುದಿಯಲ್ಲಿ ದೂಜಾನನ್ನು ಕಂಡು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕಾದು ಕುಳಿತು ದೂಜನನ್ನು ಬಹು ಆಸೆಯಿಂದ ಪಡೆದುಕೊಂಡರು. ಇಲ್ಲಿಂದ ನಡೆದಿದೆಲ್ಲವೂ ಇತಿಹಾಸ. ಕೇವಲ ದೂಜಾನಗಿದ್ದವನು ಅಲ್ಲಿಂದ ಚಾಂಪಿಯನ್ ದೂಜನಾದ. ಪದವು ಕಾನಡ್ಕದ ಹೆಸರು ಕಂಬಳ ಕ್ಷೇತ್ರದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿದ.
ಪದವು ಕಾನಡ್ಕ ಮಾತ್ರವಾಲ್ಲದೆ ಕಾರಿಂಜೆ, ಆಂಬೊಡಿಮಾರ್, ಪಡೀವಲ್ಸ್ ,ಕಾರ್ಕಳ ಹೀಗೆ ಹಲವು ತಂಡದಲ್ಲಿ ಓಡಿ ತಂಡದ ಯಜಮಾನಿಗೆ ಹೆಸರು ಮಾಡಿ ಕೊಟ್ಟಿದಾನೆ. ಪನಪಿಲ ಪ್ರವೀಣ್ ಕೋಟ್ಯಾನ್, ಮಿಜಾರು ಅಶ್ವತಪುರ ಶ್ರೀನಿವಾಸ್ ಗೌಡ, ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ ಹೀಗೆ ಓಡಿಸುವವರಿಗೂ ಹೆಸರು ಮಾಡಿ ಕೊಟ್ಟಿದ್ದಾನೆ. ದೂಜ ಕಂಬಳದ ಕೂಟದಲ್ಲಿ ಸುಮಾರು 69 ಮೆಡಲ್ಗಳನ್ನು ಗಳಿಸಿದ್ದು, ಪದವು ಕಾನಡ್ಕ ತಂಡದಲ್ಲಿ ಸುಧೀರ್ಘ 15 ವರ್ಷ ಪ್ರಯಾಣ ಮಾಡಿದ್ದಾನೆ. ಈ 15 ವರ್ಷದಲ್ಲಿ 6 ಬಾರಿ ಸರಣಿ ಶ್ರೇಷ್ಠ ಚಾಂಪಿಯನ್ ಆಗಿದ್ದಾನೆ. ದೂಜ ಮೊದಲ 3ವರ್ಷ ಹಗ್ಗ ಹಿರಿಯ ವಿಭಾಗದಲ್ಲಿ ಚಾಂಪಿಯನ್ ಆಗಿ ಮೂಡಬಿದ್ರಿ ಕಂಬಳದಲ್ಲಿ ಕಟಪಾಡಿಯ ರಾಜನೊಂದಿಗೆ ತನ್ನ ಮೊದಲ ಪದಕವನ್ನು ಗಳಿಸಿದ. ಅದರ ಬಳಿಕ ನಡೆದ ಎಲ್ಲವೂ ಇತಿಹಾಸವಾಗಿದೆ. ಅನಂತರ ಇವರು 3 ಬಾರಿ ಹಗ್ಗ ಹಿರಿಯ ವಿಭಾಗದಲ್ಲಿ "ಚಾಂಪಿಯನ್ ಆಫ್ ದಿ ಇಯರ್" ಪ್ರಶಸ್ತಿಯನ್ನು ಮುಡಿಗೇರಿಸಿದರು.
ಎಲ್ಲವೂ ಚೆನ್ನಾಗಿಯೇ ಇದ್ದಗ ದೂಜನಿಗೆ ಕೆಲವು ಕೆಟ್ಟ ದೃಷ್ಠಿಗಳ ಕಣ್ಣು ಬಿದ್ದು ತೀವ್ರ ಅನಾರೋಗ್ಯಕ್ಕೆ ಒಳಗಾಗಿ , ಸಾವು ಬದುಕಿನ ನಡುವೆ ಬಳಲುವ ಸ್ಥಿತಿ ಬಂದಿತ್ತು. ಈ ಸಂದರ್ಭದಲ್ಲಿ ದೂಜನ ಸಾವಿರಾರು ಅಭಿಮಾನಿಗಳ ಮನಸಿನಲ್ಲಿ ನೋವು ಉಂಟುಮಾಡಿತ್ತು. ದೂಜ ಶೀಘ್ರವೇ ಗುಣಮುಖನಾಗಿ ಮತ್ತೆ ಕಂಬಳದ ಕೂಟದಲ್ಲಿ ಭಾಗವಹಿಸುವಂತಾಗಲಿ ಎಂದು ದೈವದೇವರಲ್ಲಿ ಹಾಗೂ ಭಗವಂತನಿಗೆ ಪ್ರಾರ್ಥಿನೆ ಸಲ್ಲಿಸಿದ್ದಾರೆ. ದೂಜ ಗುಣಮುಖನಾಗಿ ಮತ್ತೆ ಕಂಬಳ ಕ್ಷೇತ್ರದಲ್ಲಿ ಮರುಕಳಿಸಿದನು. ಆದರೆ ಹಿಂದಿನ ಬಾರಿಯಂತೆ ವೇಗ ಇರಲಿಲ್ಲ ದೈಹಿಕಬಲ ಕ್ಷಿಣವಾಗಿದ್ದರಿಂದ ಓಡುವ ಶಕ್ತಿ ಕಮ್ಮಿಯಾಗಿತ್ತು.ಇದರ ಪರಿಣಾಮವಾಗಿ ಮನನೊಂದ ಪದವು ಕಾನಡ್ಕದ ಯಜಮಾನರು ದೂಜನನ್ನು ಬಿಟ್ಟು ಅವರಲ್ಲಿದ್ದ ಕೋಣವನ್ನು ಬೇರೆ ತಂಡಕ್ಕೆ ಮಾರಿದರು. ಈ ಘಟನೆಯಿಂದ ಕ<ಬಳ ಕೂಟದ ಒಂದು ದೊಡ್ಡ ತಂದ ಮುಂದೆ ಕೋಣಗಳನ್ನು ಕಟ್ಟದೆ ಇರುವ ತೀರ್ಮಾನಕ್ಕೆ ಬಂದಿದೆ ಎಂಬ ಸುದ್ದಿಯಿ ಅಭಿಮಾನಿಗಳ ಮನಸ್ಸಿನಲ್ಲಿ ಆಳವಾದ ದು:ಖವನ್ನು ಉಂಟುಮಾಡಿತ್ತು.
ಹಲವಾರು ಕಡೆ ದೂಜನಿಗೆ ಸನ್ಮಾನಿಸಲಾಯಿತು. ದೂಜ ಮತ್ತೊಮ್ಮೆ ಕಂಬಳದಲ್ಲಿ ಓಡಿ ಹೆಸರು, ಕೀರ್ತಿಯನ್ನು ಗಳಿಸಲಿ ಎಂದು ನಿರೀಕ್ಷಿಸುವ ಸಾವಿರಾರು ಅಭಿಮಾನಿಗಳು, ದೂಜ ತನ್ನ ಚಾಂಪಿಯನ್ ಓಟವನ್ನು ಮುಂದುವರೆಸಲಿ ಎಂದು ತುಂಬು ಹೃದಯದಿಂದ ಹಾರೈಸುತ್ತಿದ್ದಾರೆ. ಕಂಬಳ ಕೂಟದ ಸಾದಕ ದೂಜನ ಬಗ್ಗೆ ತಿಳಿಸುವ ಈ ಅಭಿಮಾನಿಯ ಸಣ್ಣ ಪ್ರಯತ್ನವಾಗಿದ್ದು, ತಪ್ಪಿದ್ದರೆ ಕ್ಷಮೆ ಇರಲಿ. ಮುಂದಕ್ಕೂ ಬರೆಯಲು ಪ್ರೋತ್ಸಾಹ ನೀಡಿ.
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ
ಜೈ ತುಳುನಾಡ್.
Super
ReplyDeleteAdbutha vishleshane 🥰🙏Jai Padavu kanadka 💚💛💚 Jai Dooja 🥰 Jai kambula 🙏🙏
Deleteಜೈ ದೂಜ ❤️
ReplyDeleteVery impressive 🫡
ReplyDeleteSuper 🥰👌👌
ReplyDelete