Posts

Showing posts from June, 2025

ಕಲಿಯುಗದ ಕಾರ್ಣಿಕ ಮೂರ್ತಿ, ಸ್ವಾಮಿ ಕೊರಗಜ್ಜ.

Image
  ಕಲಿಯುಗದ ಕಾರ್ಣಿಕ ಮೂರ್ತಿ, ಸ್ವಾಮಿ ಕೊರಗಜ್ಜ.   ನಮಸ್ಕಾರ, 1. ತುಳುನಾಡಿನ ಜನರ ನಂಬಿಕೆಯ ಮೂರ್ತಿ ತುಳುನಾಡಿನ ಜನರ ನಂಬಿಕೆಯ ಮೂರ್ತಿ ಕಲಿಯುಗದ ಸತ್ಯ  ಸ್ವಾಮಿ ಕೊರಗಜ್ಜ. ಸೋತು ಹೋಗಿರುವ  ಜೀವನದ ಓಟದಲ್ಲಿ ನೊಂದು ಬೆಂದು ಕುಸಿದಿರುವ ಹೃದಯದಲ್ಲಿ ನಮ್ಮ ಕೈ ಹಿಡಿದು ನಡೆಸುವ ಸತ್ಯ. "ಯಾರು ಇಲ್ಲ"... ಎಂಬ ಭಾವನೆ ಕಾಡುವಾಗ.... ನಿರಾಸೆಯ ಮೌನದಲ್ಲಿ ಕತ್ತಲಾದಾಗ "ನಾನು ನಿನ್ನೊಂದಿಗಿರುವೆನು" ಎಂಬ ನಂಬಿಕೆಯ ಬೆಳಕಿನ ಪಾಠ ಹೇಳುವ ಅಜ್ಜ. ಆತನ ಸ್ಮರಣೆ ಔಷಧ...ಆತನ ನುಡಿ ಸಾಂತ್ವನ...ಆತನ ಸಾನಿದ್ಯ ಶಕ್ತಿ... ತುಳುನಾಡಿನ ಕಾರ್ಣಿಕದ ದೈವ ಸ್ವಾಮಿ ಕೊರಗಜ್ಜ. ಅಜ್ಜನಿಲ್ಲದೆ ತುಳುನಾಡು ಪೂರ್ತಿಯಾಗದು, ಜನರ ನಂಬಿಕೆ ಮತ್ತು ನಿತ್ಯ ಜೀವನದ ಭಾಗವೆಂದೇ ಹೇಳಬಹುದು. ತುಳುನಾಡಿನ ಜನರು ತಮ್ಮ ಅಗತ್ಯ ವಸ್ತುಗಳನ್ನು ಕಳೆದುಕೊಂಡಾಗ "ಸ್ವಾಮಿ ಕೊರಗಜ್ಜ" ಎಂದು ಅಜ್ಜನಿಗೆ ಪ್ರೀಯವಾದ ಶೇಂಧಿ, ಚಕ್ಕುಲಿ,ಹಾಗೂ ಬೀಡ ಕೊಡುವುದಾಗಿ ಹರಕೆ ಹೇಳುತ್ತಾರೆ. ಅಜ್ಜನ ಹಸ್ತ ನಮ್ಮ ತಲೆ ಮೇಲಿದೆ ಎಂಬ ಭರವಸೆಯು ಸದಾ ಜೀವಂತ .  ಕೊರಗಜ್ಜನ ಜೀವನ ಚರಿತ್ರೆಯ ಸಂಗತಿಗಳನ್ನು ತಿಳಿಯುವ ಮೂಲಕ ಅಜ್ಜನ ನಂಬಿಕೆಯ ಶಕ್ತಿಯನ್ನು ತಿಳಿಯಬಹುದು.  2. ಕೊರಗತನಿಯ ಜನನ ಮತ್ತು ಬಾಲ್ಯಕಥೆ   ಏನ್ಸೂರು ಬರ್ಕೆ ಕೊರಗರ ಕೊಪ್ಪ ಎಂಬ ಪ್ರದೇಶದಲ್ಲಿ ಕೊರಗ ತನಿಯ ಜನಿಸುತ್ತಾನೆ. ತನಿಯನ ತಾಯಿ ಕೊರಪೋಲು ಮೈರೆ ಜಾತಿ ಸಮುದಾಯದವರೆಲ್ಲ ಸೇರಿ ಕ...

"ಅಪ್ಪು- ತೋನ್ಸೆ : ತಮ್ಮ ಹೆಜ್ಜೆಗಳಲ್ಲೆ , ಇತಿಹಾಸ ಬರೆದರು"

Image
 "ಅಪ್ಪು- ತೋನ್ಸೆ : ತಮ್ಮ ಹೆಜ್ಜೆಗಳಲ್ಲೆ... ಇತಿಹಾಸ ಬರೆದರು" ನಮಸ್ಕಾರ,   1.  ತುಳುನಾಡಿನ ಕಂಬಳದ ಸೆಲೆಬ್ರಿಟಿ ಕೋಣಗಳು ತುಳುನಾಡಿನ ಕಂಬಳದ ಕೋಣಗಳು ಕ್ರೀಡಾ ಪಟ್ಟುಗಳು ಮಾತ್ರವಲ್ಲ, ಇಲ್ಲಿನ ಜನರ ಮನಸ್ಸಿನಲ್ಲಿ  ಸೆಲೆಬ್ರಿಟಿಗಳಾಗಿದ್ದಾರೆ. ಕಂಬಳ ಕ್ರೀಡೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದ ಕೋಣಗಳಂತು ಇಲ್ಲಿನ ಸಾವಿರಾರು ಅಭಿಮಾನಿಗಳ ಹೃದಯದಲ್ಲಿ ಮನೆ ಮಾಡಿರುವ ಸ್ಟಾರ್‌ಗಳು. ಕಂಬಳ ಕ್ರೀಡೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದು ಸಾವಿರಾರು ಅಭಿಮಾನಿಗಳ ಮನಸ್ಸು ಗೆದ್ದ ಕೋಣಗಳ ಪೈಕಿ ಕಾಂತಾವರ ಬೆಲಾಡಿ ಬಾವ ಅಶೋಕ್ ಶೆಟ್ಟಿಯವರ "ಅಪ್ಪು" ಮತ್ತು "ತೋನ್ಸೆ" ಕೂಡ ಪ್ರಖ್ಯಾತರಾಗಿರುವ ಹೆಸರುಗಳು. ಆದರೆ 2025 ಮೇ 31 ರ ಮುಂಜಾನೆ ತುಳುನಾಡಿನ ಎಲ್ಲ ಕಂಬಳ ಅಭಿಮಾನಿಗಳಿಗೆ ಎಂದಿಗೂ ಮರೆಯಲಾಗದ ಆಘಾತದ ದಿನವಾಯಿತು. ಮೊಬೈಲ್‌ ಪರದೆಯ ಮೇಲೆ ಹರಿದ ಆ ದು:ಖದ ಸುದ್ದಿಯು, ಕ್ಷಣಾರ್ಧದಲ್ಲಿ ಸಾವಿರಾರು ಹೃದಯಗಳಲ್ಲಿ ನೋವಿನ ಅಲೆ ಎಬ್ಬಿಸಿ, ಮನಸ್ಸನ್ನು ತೀವ್ರವಾದ ಸಂತಾಪದಲ್ಲಿ ಮುಳುಗಿಸಿತು.  2. 2025 ಮೇ 31 – ಕಂಬಳ ಪ್ರೇಮಿಗಳಿಗೆ ಮರೆಯಲಾಗದ ದಿನ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಬಿದ್ದ ಪರಿಣಾಮವಾಗಿ ಕೋಣಗಳಿದ್ದ ಕೊಟ್ಟಿಗೆ ಸುಟ್ಟು ಹೋಗಿದ್ದು, ಬೆಳಾಡಿ ಬಾವದ ಪ್ರೀಯ ಕೋಣಗಳು "ಅಪ್ಪು" ಮತ್ತು "ತೋನ್ಸೆ" ಎಂಬ ಅಪೂರ್ವ ಪ್ರತಿಭೆಗಳನ್ನು ನಾವಿಂದು ಕಳೆದುಕೊಂಡಿದ್ದೆವೆ. ಕಂಬಳದ ಹಿರಿಮೆಯ...

"ತುಳುನಾಡಿನ ಪತ್ತನಾಜೆಯ ಆ ಹತ್ತು ದಿನಗಳು "

Image
  "ತುಳುನಾಡಿನ ಪತ್ತನಾಜೆಯ ಆ ಹತ್ತು ದಿನಗಳು " ನಮಸ್ಕಾರ, ತುಳುನಾಡಿನ ಜನರು ಪ್ರತಿ ಹಬ್ಬಕ್ಕೂ, ಆಚರಣೆಗೂ ತಮ್ಮದೇ ಆದ ವಿಶಿಷ್ಟ ಶೈಲಿಯುಳ್ಳ ಪದ್ಧತಿಯನ್ನು ಪಾಲಿಸುತ್ತಾರೆ. ಈ ಆಚರಣೆಗಳು ಕೇವಲ ಸಾಂಪ್ರದಾಯಗಳಷ್ಟೆ ಅಲ್ಲ, ಬದುಕಿನ ಭಾಗವೆ ಆಗಿದೆ. ಇಲ್ಲಿನ ಸಂಸ್ಕ್ರತಿಕ ನಂಬಿಕೆ ಪರಂಪರೆ ಸಾಂಪ್ರದಾಯಗಳ ಸಂಕಲನ. ಇಲ್ಲಿನ ಜನರು ಎಲ್ಲಾ ರೀತಿಯ ಹಬ್ಬಗಳಿಗೆ ತಮ್ಮದೇ ಆದ ಧಾರ್ಮಿಕ ಮತ್ತು ಸಾಮಾಜಿಕ ಗಡುವನ್ನು ಹೊಂದಿದ್ದಾರೆ. ತುಳುನಾಡಿನ ಪತ್ತನಾಜೆಯ ಬಳಿಕ  ಮಳೆಯ ಪ್ರಮಾಣ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. 1. ಪತ್ತನಾಜೆ ಪರಿಚಯ ತುಳುನಾಡಿನಲ್ಲಿ ಪತ್ತನಾಜೆ ಎಂದರೆ "ಬೇಸ" ತಿಂಗಳ ಎಂದರೆ ಮೇ ತಿಂಗಳಲ್ಲಿ ಬರವ ವೃಷಭ ಮಾಸದ 10ನೇ ದಿನ ಪೂರ್ವ ಸಂಪ್ರದಾಯದಂತೆ ದೇವಾಲಯದಲ್ಲಿ ನಡೆಯುವ ಬಲಿ ಉತ್ಸವ, ಕೋಲ, ನೇಮ, ಯಕ್ಷಗಾನಕ್ಕೆ ಅಲ್ಪವಿರಾಮ. ತುಳುನಾಡಿನ ಹಬ್ಬದ ಋತುವಿನ ಅಂತ್ಯದ ಒಂದು ದಿನ. ಇಲ್ಲಿನ ಜನರು ಎಲ್ಲಾ ರೀತಿಯ ಹಬ್ಬಗಳಿಗೆ ತಮ್ಮದೇ ಆದ ಧರ್ಮಿಕ ಮತ್ತು ಸಾಮಾಜಿಕ ಗಡುವನ್ನು ಹೊಂದಿದ್ದಾರೆ. ಇದು ನಿಗದಿತ ದಿನದ ಆಚರಣೆಯಾಗಿದ್ದು, ತುಳುವಿನ ಪ್ರಾದೇಶಿಕ ಕ್ಯಾಲೆಂಡರ್‌ನಲ್ಲಿ ಬೇಸ ತಿಂಗಳಿನ  2ನೇಯ ಸೌರ ತಿಂಗಳ 10ನೇ ದಿನದಂದು ಸಾಮಾನ್ಯವಾಗಿ ಪ್ರತೀ ವರ್ಷ ಮೇ ತಿಂಗಳ 24 ಅಥವ 25 ರಂದು ಬರುತ್ತದೆ. "ಪತ್ತನಾಜೆ" ಎಂದರೆ - "ಪತ್ತನೇ" ಎಂದರೆ 10ನೇ.... "ಅಜೆ" ಎಂದರೆ ಹೆಜ್ಜೆ ಎಂದ...