"ತುಳುನಾಡಿನ ಪತ್ತನಾಜೆಯ ಆ ಹತ್ತು ದಿನಗಳು "

  "ತುಳುನಾಡಿನ ಪತ್ತನಾಜೆಯ ಆ ಹತ್ತು ದಿನಗಳು "

ನಮಸ್ಕಾರ,

ತುಳುನಾಡಿನ ಜನರು ಪ್ರತಿ ಹಬ್ಬಕ್ಕೂ, ಆಚರಣೆಗೂ ತಮ್ಮದೇ ಆದ ವಿಶಿಷ್ಟ ಶೈಲಿಯುಳ್ಳ ಪದ್ಧತಿಯನ್ನು ಪಾಲಿಸುತ್ತಾರೆ. ಈ ಆಚರಣೆಗಳು ಕೇವಲ ಸಾಂಪ್ರದಾಯಗಳಷ್ಟೆ ಅಲ್ಲ, ಬದುಕಿನ ಭಾಗವೆ ಆಗಿದೆ. ಇಲ್ಲಿನ ಸಂಸ್ಕ್ರತಿಕ ನಂಬಿಕೆ ಪರಂಪರೆ ಸಾಂಪ್ರದಾಯಗಳ ಸಂಕಲನ. ಇಲ್ಲಿನ ಜನರು ಎಲ್ಲಾ ರೀತಿಯ ಹಬ್ಬಗಳಿಗೆ ತಮ್ಮದೇ ಆದ ಧಾರ್ಮಿಕ ಮತ್ತು ಸಾಮಾಜಿಕ ಗಡುವನ್ನು ಹೊಂದಿದ್ದಾರೆ. ತುಳುನಾಡಿನ ಪತ್ತನಾಜೆಯ ಬಳಿಕ  ಮಳೆಯ ಪ್ರಮಾಣ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.


ತುಳುನಾಡಿನಲ್ಲಿ ಪತ್ತನಾಜೆ ಎಂದರೆ "ಬೇಸ" ತಿಂಗಳ ಎಂದರೆ ಮೇ ತಿಂಗಳಲ್ಲಿ ಬರವ ವೃಷಭ ಮಾಸದ 10ನೇ ದಿನ ಪೂರ್ವ ಸಂಪ್ರದಾಯದಂತೆ ದೇವಾಲಯದಲ್ಲಿ ನಡೆಯುವ ಬಲಿ ಉತ್ಸವ, ಕೋಲ, ನೇಮ, ಯಕ್ಷಗಾನಕ್ಕೆ ಅಲ್ಪವಿರಾಮ. ತುಳುನಾಡಿನ ಹಬ್ಬದ ಋತುವಿನ ಅಂತ್ಯದ ಒಂದು ದಿನ. ಇಲ್ಲಿನ ಜನರು ಎಲ್ಲಾ ರೀತಿಯ ಹಬ್ಬಗಳಿಗೆ ತಮ್ಮದೇ ಆದ ಧರ್ಮಿಕ ಮತ್ತು ಸಾಮಾಜಿಕ ಗಡುವನ್ನು ಹೊಂದಿದ್ದಾರೆ. ಇದು ನಿಗದಿತ ದಿನದ ಆಚರಣೆಯಾಗಿದ್ದು, ತುಳುವಿನ ಪ್ರಾದೇಶಿಕ ಕ್ಯಾಲೆಂಡರ್‌ನಲ್ಲಿ ಬೇಸ ತಿಂಗಳಿನ  2ನೇಯ ಸೌರ ತಿಂಗಳ 10ನೇ ದಿನದಂದು ಸಾಮಾನ್ಯವಾಗಿ ಪ್ರತೀ ವರ್ಷ ಮೇ ತಿಂಗಳ 24 ಅಥವ 25 ರಂದು ಬರುತ್ತದೆ. "ಪತ್ತನಾಜೆ" ಎಂದರೆ - "ಪತ್ತನೇ" ಎಂದರೆ 10ನೇ.... "ಅಜೆ" ಎಂದರೆ ಹೆಜ್ಜೆ ಎಂದು ಅರ್ಥವಿದೆ. ಅದೇ ರೀತಿಯಲ್ಲಿ 2025ರ ಮೇ 14 ನೇ ಸಂಕ್ರಮಣದಿಂದ ಮೇ 24 ರವರೆಗೆ 10 ದಿನಗಳ ಕಾಲ ಪತ್ತನಾಜೆಯಾಗಿತ್ತು.   


ತುಳುನಾಡಿನ ಸಂಸ್ಕ್ರತಿಯಂತೆ ವಾರ್ಷಿಕ ರಥೋತ್ಸವ, ನೇಮೋತ್ಸವ, ಜನಪದ ಕುಣಿತ, ಕಂಬಳ, ಯಕ್ಷಗಾನ, ಹುಲಿ ವೇಷ, ಹೀಗೇ ಮೊದಲಾದ ಅನೇಕ ಆಚರಣೆಗಳು ತುಳುನಾಡಿನಾದ್ಯಂತ ಜಾರ್ದೆ ತಿಂಗಳಲ್ಲಿ ಪ್ರಾರಂಭಗೊಂಡು ಪತ್ತನಾಜೆಯಲ್ಲಿ ಮುಕ್ತಯಗೊಳ್ಳುತ್ತವೆ. ಹಿರಿಯರು ಪತ್ತನಾಜೆಯಲ್ಲಿ ಸಂಭ್ರಮಾಚರಣೆಗಳಿಗೆ ಗಡುವು ಹಾಕುತ್ತಿದ್ದರು. ಇದು ತುಳುನಾಡಿನ ಹವಮಾನ ಅಭ್ಯಾಸ ಮಾಡಿದ ಇಲ್ಲಿನ ಜನರು ಮಾಡಿಕೊಂಡ ಪಂಚಾಂಗ.  ಪತ್ತನಾಜೆಯನ್ನು ದ.ಕ, ಉಡುಪಿ, ಕಾಸರಗೋಡು ಮತ್ತು ಕರ್ನಾಟಕದ ಕೊಡಗು ಜಿಲ್ಲೆಯ ಕೆಲವು ಭಾಗಗಳಲ್ಲಿ ಆಚರಣೆಯಲ್ಲಿದೆ. 




ವಾರ್ಷಿಕ ಉತ್ಸವಗಳು, ವಿಶೇಷ ಪರ್ವಗಳು, ಹಾಗೂ ದೈವಿಕ ದೈವಾಸ್ಥನಗಳಲ್ಲಿ ನಡೆಯುವ ಉತ್ಸವಗಳು ಈ ಪತ್ತನಾಜೆಯಲ್ಲಿ ಮುಕ್ತಯಗೊಳ್ಳುತ್ತದೆ. ಮುಂದಿನ 3 ತಿಂಗಳು "ಕೋರಿ ಕಟ್ಟ" (ಕೋಳಿ ಕಾಳಗ) ಈ ಅವಧಿಯಲ್ಲಿ ಯಾವುದೇ ಪ್ರಮುಖ ಧಾರ್ಮಿಕ ಉತ್ಸವಗಳು, ದೈವ ಕೋಲ ರಥೋತ್ಸವಗಳು ಇರುವುದಿಲ್ಲ,  ಹಾಗೆಯೇ ತುಳುನಾಡಿನ ದೇವಾಲಯಗಳಲ್ಲಿ ವಿಶೇಷ ಉತ್ಸವಗಳು ನಡೆಯುವುದಿಲ್ಲ, ಆದರೆ ಸಾಮಾನ್ಯ ಪೂಜೆ ಮತ್ತು ನಿತ್ಯ ಪೂಜೆಗಳು ಎಂದಿನಂತೆ ನಡೆಯುತ್ತದೆ. 


ತುಳುನಾಡಿನಲ್ಲಿ 30ಕ್ಕೂ ಹೆಚ್ಚು ಜನಪದ ಕಥೆಗಳಿವೆ. ಅವುಗಳು ಕೆಲವು ವಿವಿಧ ಜಾತಿಗಳಿಂದ ನಡೆಯುತ್ತದೆ. ಆಟಿಯಿಂದ ಪತ್ತನಾಜೆಯವರೆಗೆ ಮಗ್ಗಗಳು ವಿಭಿನ್ನವಾಗಿ ನಡೆಯುತ್ತಿರುತ್ತದೆ. ಅವು ಆಟಿ ಕಳಂಜ, ಸೋಣದ ಜೋಗಿ, ಸೋಣದ ಮದಿಮಾಲ್‌,ಕಾವೇರಿ ಪುರುಸೆ, ಮಾದಿರ, ಮಾಯೆರ್‌ದ ಪುರುಸೆ, ಮಾಕಲಿ, ಮಾರುವೆ, ಕನ್ಯ ಪೂ, ಪೊಲ್ಸೊಂಡಿ ಪೋಪಿನಿ, ಮೂರ್ಲೆ ನಲಿಕೆ. ಇವುಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಪ್ರತ್ರವಿದೆ. ಪತ್ತನಾಜೆಯ ದಿನ ಗುಳಿಗ, ಭೈರವ ಮತ್ತು ದೈವಗಳ ಎಲ್ಲಾ ಇತರ ಪೂಜಾ ಸ್ಥಳಗಳು ದೈವ ದೇಗುಲ, ವಿಶೇಷ ಚೇತನವನ್ನ ಸಮಾದಾನ ಪಡಿಸಲು ಬಾಳೆ ಎಲೆಯಲ್ಲಿ "ಪೊರಿ ಪನಿಯಾರ"ವನ್ನು ಅರ್ಪಿಸಲಾಗುತ್ತದೆ.  

ಪತ್ತನಾಜೆಯ ಹೆಚ್ಚಿನ ಆಚರಣೆಗಳನ್ನು ಮನೆಯ ಹೊರಗೆ ಹೆಚ್ಚಾಗಿ ದೈವಸ್ಥನ, ಗುಳಿಗನ ಕಟ್ಟೆ, ಬೈರವನ ಕಟ್ಟೆ, ಅಥವ ದೈವದ ಕಲ್ಲಿನ ಮುಂದೆ ಆಚರಿಸಲಾಗುತ್ತದೆ. ತುಳುನಾಡಿನ ಸತ್ತಮುತ್ತಲಿನ ಪ್ರದೇಶಗಳ ಎಲ್ಲಾ ಯಕ್ಷಗಾನ ಮೇಳದವರು ತಮ್ಮ ವೇಷ ಭೂಷಣಗಳನ್ನು ತೆಗೆದು ಅದನ್ನು ಮುಂದಿನ ಅವಧಿಯವರೆಗೆ ಸುರಕ್ಷಿತವಾಗಿ ಇಟ್ಟುಕೊಳ್ಳುತ್ತಾರೆ. ಇದನ್ನು "ಗೆಜ್ಜೆ ಬಿಚ್ಚವುನು" ಎಂದು ಕರೆಯಲಾಗುತ್ತದೆ.


ದೈವ ನರ್ತಕರು ತಮ್ಮ ತಮ್ಮ ಸೇವೆಯನ್ನು ಮುಗಿಸಿ ತಮ್ಮ ಗಗ್ಗರಗಳಿಗೆ ತಂಬಿಲ ಸೇವೆಯನ್ನು ಕೊಡುವ ಪದ್ದತಿಯು ಕೂಡ ಇಂದಿಗೂ ನಡೆಯುತ್ತಿದೆ. "ಹಳೆ ಬೇರು...ಹೊಸ ಚಿಗುರು ಕೂಡಿರಲು ಮರಸೊಬಗು," ಹಳೇ ಬೇರನ್ನು ನಾವು ತುಂಡರಿಸದೆ, ಹೊಸ ಚಿಗುರು ಬೆಳೆಯಲು ಅವಕಾಶ ಕೊಟ್ಟು ಇಲ್ಲಿನ ವಿಶಿಷ್ಟ ಆಚರಣೆ ಸಾಂಪ್ರದಾಯವನ್ನು ಜನರು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ದೊಡ್ಡ ಆಸ್ತಿಯನ್ನು ಈ ಆಚರಣೆಗಳ ಮುಖಾಂತರ ಬೆಳೆಸಿಕೊಂಡು ಬಂದಿದ್ದಾರೆ. ಇಂತಹ ಸಂಸ್ಕ್ರತಿ ಹಿರಿಯರಿಂದ ಬಂದಂತಹ ಸಂಪ್ರದಾಯಗಳನ್ನು ಉಳಿಸಿ...ಬೆಳೆಸುವುದು ನಮ್ಮ ಕರ್ತವ್ಯ. ಈ ಪತ್ತನಾಜೆಯ ಸಮಯದಲ್ಲಿ ತುಳುನಾಡಿನ ಜನರು ವಿಶೇಷವಾಗಿ ಹಲಸಿನ ಹಣ್ಣಿನ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸುತ್ತಾರೆ. ತಜಂಕ್‌, ಕಲಲಾಂಬು, ಪೆರ್ಗೆಲಾಂಬು(ಅಣಬೆ), ನರ್ತೆ, ಡೆಂಜಿ(ಏಡಿ) ಹೀಗೆ ಹಲವಾರು ವಿಶಿಷ್ಟವಾದ ಆಹಾರವನ್ನು ಮಳೆಗಾಲದ ಸಮಯದಲ್ಲಿ ಸವಿಯುತ್ತಾರೆ. ಈ ಪತ್ತನಾಜೆಯ ದಿನಗಳು ಕಳೆದ ನಂತರ ನಾಗರಪಂಚಮಿಯ ಬಳಿಕ ಹೆಚ್ಚಾಗಿ ಎಲ್ಲ ವಿಶೇಷ ಆಚರಣೆಗಳು ಪುನ: ಪ್ರಾರಂಭವಾಗುತ್ತದೆ.



ನಮ್ಮ ಹಿರಿಯರು ತಿಳಿಸಿಕೊಟ್ಟಂತೆ ಇಂತಹ ವಿಶೇಷವಾದ ನಮ್ಮ ಸಂಸ್ಕೃತಿಯ ಸಂಪ್ರಾದಾಯಗಳು ನಮಗೆ ಹೊಸದಾಗಿ ಕಲಿಯಲು ಪ್ರೇರಣೆ ನೀಡುತ್ತವೆ. ಇಂತಹ ಆಚಾರ ವಿಚಾರಗಳು ನಮ್ಮನ್ನು ಸಂಸ್ಕ್ರತಿಯತ್ತ ಸೆಳೆಯುತ್ತವೆ. ಇಂದಿಗೂ ಈ ಆಚಾರಗಳು ನಮ್ಮ ದಿನಚರಿಯಲ್ಲಿ ಜೀವಂತವಾಗಿರುವುದು ನಿಜಕ್ಕೂ ಅದ್ಬುತ....! 

ನಮ್ಮ ಸಂಸ್ಕ್ರತಿ...ನಮ್ಮ ಹೆಮ್ಮೆ

 ಜೈ ತುಳುನಾಡ್‌


Comments

Post a Comment

Popular posts from this blog

"ಕಂಬಳ ಕ್ಷೇತ್ರದ ಸಾದಕ, ಚಾಂಪಿಯನ್ ದೂಜ"

ಕಾರ್ಕಳ - ಕಣ್ಣುಗಳಿಗೆ ಹಬ್ಬ, ಮನಸ್ಸಿಗೆ ಶಾಂತಿ

ತುಳುನಾಡಿನ ಜನಪ್ರಿಯ ಕ್ರೀಡೆ "ಕಂಬಳ"